ಕೋವಿಡ್-19 ಮುಂದಿನ ವರ್ಷದ ಆರಂಭದಲ್ಲಿ ನಿಯಂತ್ರಿಸಬಹುದು: ಸರಕಾರ ನೇಮಿಸಿದ ಸಮಿತಿ

Update: 2020-10-18 10:03 GMT

ಹೊಸದಿಲ್ಲಿ:ಭಾರತದಲ್ಲಿ ಕೊರೋನ ವೈರಸ್ ಶಿಖರವನ್ನು ದಾಟಿದೆ ಹಾಗೂ ಎಲ್ಲ ಕ್ರಮಗಳನ್ನು ಅನುಸರಿಸಿದರೆ ಮುಂದಿನ ವರ್ಷದ ಆರಂಭದಲ್ಲಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಬಹುದು ಎಂದು ಸರಕಾರ ನೇಮಿಸಿದ ಸಮಿತಿ ಹೇಳಿದೆ.

 ಆದರೆ, ಚಳಿಗಾಲದ ಆರಂಭ ಹಾಗೂ ಮುಂಬರುವ ಹಬ್ಬದ ದಿನಗಳಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು ಹಾಗೂ ಈ ಹಂತದಲ್ಲಿ ಸಡಿಲಿಕೆಯು ಮತ್ತೆ ಏರಿಕೆಗೆ ಕಾರಣವಾಗಬಹುದು. ಸುರಕ್ಷತಾ ಕ್ರಮಗಳಿಗೆ ವಿರಾಮ ನೀಡಿದರೆ ಕೊರೋನದ ಏರಿಕೆಗೆ ಕಾರಣವಾಗಬಹುದು. ಎಲ್ಲ ಶಿಷ್ಟಾಚಾರಗಳನ್ನು ಅನುಸರಿಸಿದರೆ, ಫೆಬ್ರವರಿ ಅಂತ್ಯದ ವೇಳೆಗೆ ಕನಿಷ್ಠ ಸಕ್ರಿಯ ಪ್ರಕರಣಗಳೊಂದಿಗೆ ಸಾಂಕ್ರಾಮಿಕ ರೋಗವನ್ನು ಮುಂದಿನ ವರ್ಷ ಆರಂಭದಲ್ಲಿ ನಿಯಂತ್ರಿಸಬಹುದು ಎಂದು ಸಮಿತಿ ತೀರ್ಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News