ಯಕ್ಷಸಿರಿ ಪ್ರಶಸಿಗೆ ಆಯ್ಕೆಯಾದ ಸರ್ವೋತ್ತಮ ಗಾಣಿಗರಿಗೆ ಸಮ್ಮಾನ

Update: 2020-10-18 14:10 GMT

ಕೋಟ, ಅ.18: ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ವತಿಯಿಂದ ಕೊಡ ಮಾಡುವ ಯಕ್ಷಸಿರಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಹಾರಾಡಿ ಸರ್ವೋತ್ತಮ ಗಾಣಿಗರಿಗೆ ಗಾಣಿಗ ಯುವಸಂಘಟನೆ ಕೋಟ ಘಟಕದ ವತಿಯಿಂದ ಅ.18ರಂದು ಹಾರಾಡಿಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

ಗಾಣಿಗ ಯುವ ಸಂಘಟನೆ ಕೋಟ ಘಟಕದ ಅಧ್ಯಕ್ಷ ವಿಶ್ವನಾಥ ಗಾಣಿಗ ಬೆಟ್ಲಕ್ಕಿ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲೇ ಅತ್ಯುನ್ನತವಾದ ಯಕ್ಷಸಿರಿ ಪ್ರಶಸ್ತಿಗೆ ನಮ್ಮ ಸಮಾಜದ ಸರ್ವಗಾಣಿಗರು ಆಯ್ಕೆಯಾಗಿರುವುದು ಇಡೀ ಸಮಾಜಕ್ಕೆ ಸಂದ ಗೌರವ ಎಂದರು.

ಗಾಣಿಗ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ ಕೋಟ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಂಘಟನೆಯ ಕಾರ್ಯದರ್ಶಿ ನಾಗರಾಜ್ ಗಾಣಿಗ ಸಾಲಿಗ್ರಾಮ ಶುಭ ಹಾರೈಸಿದರು.

ಯುವ ಸಂಘಟನೆ ಕೋಟ ಘಟಕದ ಖಜಾಂಚಿ ಗಿರೀಶ್ ಗಾಣಿಗ ಬೆಟ್ಲಕ್ಕಿ, ಪ್ರಕಾಶ್ ಗಾಣಿಗ ಕಾರ್ಕಡ ಮೊದಲಾದವರು ಉಪಸ್ಥಿತರಿದ್ದರು. ಗಾಣಿಗ ಯುವ ಸಂಘಟನೆ ಕೋಟ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News