ಪಣಂಬೂರು ಬೀಚ್‌ನಲ್ಲಿ ಮತ್ತೆ ಇಬ್ಬರ ರಕ್ಷಣೆ

Update: 2020-10-18 14:32 GMT

ಮಂಗಳೂರು, ಅ.18: ಪಣಂಬೂರು ಬೀಚ್‌ನಲ್ಲಿ ನೀರು ಪಾಲಾಗುತ್ತಿದ್ದ ಇಬ್ಬರನ್ನು ಜೀವ ರಕ್ಷಕ ಪಡೆ ರವಿವಾರ ರಕ್ಷಣೆ ಮಾಡಿದೆ.

ವಿಜಯಪುರದ ಇಟಗಿಯ ಶರಣಪ್ಪ (35) ಹಾಗೂ ಜೋಕಟ್ಟೆಯ ನಾಗರಾಜ ಎಚ್.ಎಸ್. (18) ರಕ್ಷಣೆಗೊಳಗಾದವರು.

ಶನಿವಾರ ಹೊಸಪೇಟೆಯ ಅಜಿತ್ ಎಂಬವರನ್ನು ರಕ್ಷಿಸಲಾಗಿತ್ತು. 10 ಮಂದಿ ಸ್ನೇಹಿತರೊಂದಿಗೆ ಬೀಚ್‌ಗೆ ಬಂದು ಸಮುದ್ರಕ್ಕಿಳಿದಿದ್ದರು. ಬೃಹತ್ ಗಾತ್ರದ ತೆರೆ ಅಪ್ಪಳಿಸಿದ್ದು, ಈ ಸಂದರ್ಭ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ತಕ್ಷಣ ಅಲ್ಲಿದ್ದ ಜೀವ ರಕ್ಷಕ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿ ದಡಕ್ಕೆ ತಲುಪಿಸಿದ್ದಾರೆ.

ವಾರಾಂತ್ಯಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೀಚ್‌ಗೆ ಬರುತ್ತಿದ್ದಾರೆ. ಜೀವ ರಕ್ಷಕ ಪಡೆಯವರು ನೀಡುವ ಎಚ್ಚರಿಕೆಗೆ ಸ್ಪಂದಿಸದೆ ಸಮುದ್ರಕ್ಕೆ ಇಳಿಯುವುದರಿಂದ ದುರ್ಘಟನೆ ನಡೆಯುತ್ತಿವೆ. ಪಣಂಬೂರು ಬೀಚ್ ಅಪಾಯಕಾರಿಯಾಗಿದ್ದು, ಪ್ರವಾಸಿಗರು ನೀರಿಗಿಳಿದು ಮುಂದು ವರಿಯುವ ದುಸ್ಸಾಹಸ ಮಾಡಬಾರದು ಎಂದು ಯತೀಶ್ ಬೈಕಂಪಾಡಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News