ಶಾಮಿಯಾನ ಮಾಲಕರ ಸಂಘದ ಮಹಾಸಭೆ

Update: 2020-10-18 14:35 GMT

ಮಂಗಳೂರು, ಅ.18: ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮಂಗಳೂರು ಘಟಕದ 2ನೇ ವಾರ್ಷಿಕ ಮಹಾಸಭೆಯು ಪದುವಾ ಹೈಸ್ಕೂಲ್‌ನ ಅಡಿಟೋರಿಯಂನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಘಟಕದ ಅಧ್ಯಕ್ಷ ಉಮಾನಾಥ ಸುವರ್ಣ ನೀರುಮಾರ್ಗ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ. ವಿಟ್ಲ, ಜಿಲ್ಲಾ ಕಾರ್ಯದರ್ಶಿ ಶಿವ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಕ್ಲೆವರ್ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ಯುವರಾಜ್ ಮೂಡುಶೆಡ್ಡೆ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಹರೀಶ್ ಪಡೀಲ್ ಗತವರ್ಷದ ಲೆಕ್ಕಪತ್ರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಶಾಮಿಯಾನ ಮಾಲಕರ ಮಂಗಳೂರು ಸಂಘದ ಸ್ಥಾಪಕಾಧ್ಯಕ್ಷ ಉಮಾನಾಥ ಸುವರ್ಣ ನೀರುಮಾರ್ಗ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನಿಕಟಪೂರ್ವ ಅಧ್ಯಕ್ಷ: ಉಮನಾಥ ಸುವರ್ಣ ನೀರುಮಾರ್ಗ. ಗೌರವಾಧ್ಯಕ್ಷ: ಭಾಸ್ಕರ್ ರಾವ್,. ಅಧ್ಯಕ್ಷ: ಕ್ಲೆವರ್ ಡಿಸೋಜ, ಉಪಾಧ್ಯಕ್ಷರು: ಯವರಾಜ್ ಮೂಡುಶೆಡ್ಡೆ, ರಹೀಂ ಉಜ್ವಲ್, ಹರೀಶ್ ಪಡೀಲ್, ಪ್ರಧಾನ ಕಾರ್ಯದರ್ಶಿ: ನಿಶಿತ್, ಬಾಲಕಷ್ಣ ಕದ್ರಿ, ಜತೆ ಕಾರ್ಯದರ್ಶಿ ಗುರು ದತ್, ಸ್ಟಾಲ್ಲಿ ಅಂಚನ್, ಗೌರವ ಸಲಹೆಗಾರರು: ತಮ್ಮಣ್ಣ, ಬಾಲಕಷ್ಣ ಪಚ್ಚನಾಡಿ, ಅನೀಶ್, ರಶೀದ್, ರಂಜನ್ ಕೆ.ಎಸ್, ಸ್ಟಾನಿ ಪಿಂಟೊ, ವಿವಿಯನ್ ಲೊಬೋ, ಸಂಘಟನಾ ಕಾರ್ಯದರ್ಶಿ: ಸ್ಪಂದನಾ ನಾಗರಾಜ್, ಗಾಡ್ವಿನ್ ವಾಮಂಜೂರ್, ಜುಬೇರ್ ಮಲ್ಲೂರು, ಪೀಟರ್ ಡಿಸೋಜ, ಭಾಸ್ಕರ್ ತೊಕ್ಕೋಟು, ಆಲ್ವಿನ್ ಪೆರೀನ್, ಸಂಚಾಲಕರಾಗಿ ಅನೀಫ್, ಗಣೇಶ್ ಪ್ರಸಾದ್, ವೇಣುಗೋಪಾಲ್ ಶೆಟ್ಟಿ , ಸಲೀಂ , ರೋಹಿತ್, ಸತೀಶ್, ರಾಜೇಶ್ ಭಟ್, ಸಲೀಂ, ವಿವೇಕಾನಂದ, ಪ್ರವೀಣ್, ಜಗನ್ನಾಥ ಶೆಣೈ, ಭಾಸ್ಕರ್, ಡೆನ್ನಿಸ್, ಗಂಗಾಧರ, ಫ್ರಾನ್ಸಿಸ್ ವಾಸ್, ರವಿಚಂದ್ರ, ಇಕ್ಬಾಲ್, ಚಂದ್ರಶೇಖರ, ಸುಧೀರ್, ಸುಲೈಮಾನ್ ಆಯ್ಕೆಯಾಗಿದ್ದಾರೆ.

ಯುವರಾಜ್ ಮೂಡುಶೆಡ್ಡೆ ವಂದಿಸಿದರು. ಪ್ರತೀಶ್ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News