ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2020-10-18 15:27 GMT
ಮುಹಮ್ಮದ್ ಇಕ್ಬಾಲ್

ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಮತ್ತು ಉಡುಪಿ ಜಿಲ್ಲೆ ಇದರ13ನೇ ವಾಷಿ೯ಕ ಮಹಾಸಭೆಯು ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಬಿಇಎಂ ಹೈಸ್ಕೂಲ್ ಸಭಾಂಗಣದಲ್ಲಿ ರವಿವಾರ ನಡೆಯಿತು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ಸದಾಶಿವದಾಸ್ ಪಾಂಡೇಶ್ವರ್ ಉಪಸ್ಥಿತರಿದ್ದರು. ಸಂಘದ ಕಾನೂನು ಸಲಹೆಗಾರರಾದ ನಗರದ ಖ್ಯಾತ ವಕೀಲ ಸತೀಶ್ ಭಟ್ ಚುನಾವಣಾ ಕಾರ್ಯವನ್ನು ನಡೆಸಿಕೊಟ್ಟರು. ರಮೇಶ್ ಸಾಲಿಯಾನ್ 2019-20ರ ವರದಿ ಹಾಗೂ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು. 

ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಅವರು ಪುನರಾಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಮಲ್ಲಿಕಾ ಶೆಟ್ಟಿ, ಮುಕ್ತಾ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಸಾಲಿಯಾನ್, ಜೊತೆ ಕಾರ್ಯದರ್ಶಿಯಾಗಿ ಜ್ಯೊತಿ ಚಂದ್ರಶೇಖರ್, ಪ್ರಜ್ವಲ್ ಆಚಾರ್ಯ, ಖಜಾಂಚಿಯಾಗಿ ಐವನ್ ರಿಚರ್ಡ್ ಡಿ'ಸೋಜ, ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ ಪ್ರಸಾದ್, ಸುಭಾಶಿತ್, ಸಂಚಾಲಕರಾಗಿ ಮೋಹನ್ ಪ್ರಸಾದ್ ನಂತೂರು, ಶರತ್ ಉಚ್ಚಿಲ್, ಕಮಿಟಿ ಸದಸ್ಯರುಗಳಾಗಿ ರಂಜನ್ ದಾಸ್, ಧನುರಾಜ್ ಎನ್ಎಂಪಿಟಿ, ಸಂತೋಷ್ ಆಂಚನ್, ದಿನಕರ್ ಪಾಂಡೇಶ್ವರ, ಹುಸೈನ್ ಕಾಟಿಪಳ್ಳ, ಕೆವಿನ್ ಮಿಸ್ಕಿತ್, ಕೇಶವ ಕನಿಲ, ರಾಧಾಕೃಷ್ಣ ಭಟ್, ಜನಾಧ೯ನ ಪದ್ಮಶಾಲಿ, ಸ್ವಪ್ನಾ ರಾಜ್ ಆಯ್ಕೆಯಾದರು.

ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News