ಮುಂಡಳ್ಳಿ: ದೇವಸ್ಥಾನದ ಚಿನ್ನಾಭರಣ ಕಳವು

Update: 2020-10-18 17:04 GMT

ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ದೇವರ  ಚಿನ್ನಾಭರಣ ನಾಪತ್ತೆಯಾದ ಬಗ್ಗೆ  ಶನಿವಾರ ರಾತ್ರಿ ತಿಳಿದುಬಂದಿದೆ.

ನವರಾತ್ರಿಯ ಮೊದಲನೇ ದಿನವಾದ ಶನಿವಾರ ಬೆಳಿಗ್ಗೆ ದೇವಸ್ಥಾನದ ಅರ್ಚಕರು ದೇವಿಗೆ ಚಿನ್ನದ  ಆಭರಣ ತೊಡಿಸುವ ಸಂಧರ್ಭದಲ್ಲಿ ಆಭರಣ ವನ್ನು ಹುಡುಕಾಡಿದಾಗ ಸುಮಾರು 50 ಲಕ್ಷಕ್ಕೂ ಅಧಿಕ ದೇವಿಯ ಆಭರಣ ಕಳವಾದ  ಬಗ್ಗೆ ಮಾಹಿತಿ ಬಂದಿದೆ.

ಈ ಚಿನ್ನಾಭರಣ ಯಾವಾಗ ಕಳುವಾಗಿದೆ  ಎಂದು ನಿಖರವಾದ ಮಾಹಿತಿ ಇಲ್ಲವಾಗಿದ್ದು , ಬಾಗಿಲನ್ನು ಮುರಿಯದೇ ಚಿನ್ನಾಭರಣ ನಾಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯವರು ಈ ಬಗ್ಗೆ ಶನಿವಾರ ರಾತ್ರಿ ಪೊಲೀಸರಿಗೆ ಕಳವಾದ ಬಗ್ಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News