ಡಾ. ದೇವದಾಸ ಶೆಣೈಗೆ ಸನ್ಮಾನ
Update: 2020-10-19 22:38 IST
ಮಂಗಳೂರು, ಅ.19: ಅಶೋಕನಗರದ ಮುಡಾರೆ ೌಂಡೇಶನ್ ಮತ್ತು ಸ್ಪಂದನ ್ರೆಂಡ್ಸ್ ಅಶೋಕನಗರ ಸಹಯೋಗದಲ್ಲಿ ಸರೋಳ್ಯ ಆನಂದ ಆಳ್ವ ಮತ್ತು ಬೈಲುಮೂಡುಕೆರೆ ಸುಮತಿ ಆಳ್ವ ಸ್ಮರಣಾರ್ಥ ಅಂತಾರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಡಾ. ದೇವದಾಸ ಶೆಣೈ ಚಿಲಿಂಬಿ ಅವರನ್ನು ಸನ್ಮಾನಿಸಲಾಯಿತು.
ಕೊರೋನ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ಆರೋಗ್ಯದ ಕಾಳಜಿ ವಹಿಸಿ ಸೂಕ್ತ ಚಿಕಿತ್ಸೆ ನೀಡಿರುವ ಡಾ. ದೇವದಾಸ್ ಅವರನ್ನು ಅವರ ನಿವಾಸದಲ್ಲಿ ರವಿವಾರ ಸನ್ಮಾನಿಸಲಾಯಿತು.
ಮಹಾಗಣಪತಿ ದೇವಸ್ಥಾನ ಅಧ್ಯಕ್ಷ ಸುರೇಂದ್ರ ರಾವ್, ಮನಪಾ ಸದಸ್ಯರಾದ ಗಣೇಶ ಕುಮಾಲ್, ಟಿ. ಪ್ರವೀಣಚಂದ್ರ ಆಳ್ವ, ಮುಡಾರೆ ಫೌಂಡೇಶನ್ ಅಧ್ಯಕ್ಷ ಸತೀಶ್ ಆಳ್ವ, ಅಶೋಕನಗರ ಸ್ಪಂದನ ಫ್ರೆಂಡ್ಸ್ ಅಧ್ಯಕ್ಷ ಜೊಸ್ಸಿ ಸೋನ್ಸ್, ಬಿಜೆಪಿ ಮುಖಂಡ ಶಾನವಾಜ್, ಪದಾಧಿಕಾರಿಗಳು ಉಪಸ್ಥಿತರಿದ್ದರು.