ಚಿನ್ನದಂಗಡಿಯಲ್ಲಿ ಕಳವು

Update: 2020-10-22 16:18 GMT

ಉಡುಪಿ, ಅ.22: ನಗರದ ತೆಂಕಪೇಟೆಯಲ್ಲಿರುವ ಚಿನ್ನಕ್ಕೆ ಪಾಲಿಷ್ ಮಾಡುವ ಅಂಗಡಿಯೊಂದರ ಬಾಗಿಲು ಮುರಿದು ಒಳನುಗ್ಗಿದ ಯಾರೋ ಕಳ್ಳರು, ಅಂಗಡಿಯಲ್ಲಿದ್ದ ಸುಮಾರು ಒಂದೂವರೆ ಪವನ್ ಚಿನ್ನದ ಚೈನ್, ಬೆಂಡೋಲೆ ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ವರದಿಯಾಗಿದೆ.

ತೆಂಕಪೇಟೆಯ ಮನೀಷ್ ಜ್ಯುವೆಲ್ಲರ್ಸ್‌ ಕೋಟಿಂಗ್ ವರ್ಕ್ಸ್‌ನ ಅಂಗಡಿಗೆ ಬುಧವಾರ ರಾತ್ರಿ 9ರಿಂದ ಇಂದು ಬೆಳಗ್ಗೆ 6ರ ನಡುವಿನ ಅವಧಿಯಲ್ಲಿ ಅಂಗಡಿಯ ಶಟರ್‌ನ್ನು ಮುರಿದು ಒಳನುಗ್ಗಿ ಡ್ರಾವರ್‌ನಲ್ಲಿದ್ದ ನಗದು ಹಣ 6000ರೂ. ಸೇರಿದಂತೆ ಒಟ್ಟು ಸುಮಾರು 66,000ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಶಿವಾನಂದ ಆಚಾರ್ಯ ಎಂಬವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News