ಕಾಪು: ಅ.24ರಂದು ಪ್ರವಾದಿ ಮುಹಮ್ಮದ್(ಸ.)ರ ಜೀವನ ಮತ್ತು ಸಂದೇಶ’ ವಿಶೇಷ ಕಾರ್ಯಕ್ರಮ

Update: 2020-10-22 16:32 GMT

ಕಾಪು, ಅ. 22: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾಪು ತಾಲೂಕು ಘಟಕದ ವತಿಯಿಂದ ಅ.24ರಂದು ‘ಮಾನವತೆಯ ಪ್ರತಿಪಾದಕ ಪ್ರವಾದಿ ಮುಹಮ್ಮದ್(ಸ.)ರ ಜೀವನ ಮತ್ತು ಸಂದೇಶ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾಪುವಿನ ಹೋಟೆಲ್ ಕೆ ಒನ್ ಹೊಟೇಲ್‌ನ ಶಾಂಭವಿ ಸಭಾಂಗಣದಲ್ಲಿ ಅಂದು ಪೂರ್ವಾಹ್ನ 11:30ರಿಂದ 1:30ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಒಕ್ಕೂಟದ ಜಿಲ್ಲಾ ಸಮಿತಿಯ ಸದಸ್ಯ ಮುಹಮ್ಮದ್ ಇದ್ರೀಸ್ ವಿಷಯ ಮಂಡನೆ ಮಾಡುವರು. ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಅಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯ್ದಿನಬ್ಬ, ಉಳಿಯಾರಗೋಳಿ ದಂಡತೀರ್ಥ ಪಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನೀಲಾನಂದ ನಾಯ್ಕ ಭಾಗವಹಿಸುವರು ಎಂದು ಒಕ್ಕೂಟದ ಕಾಪು ತಾಲೂಕು ಅಧ್ಯಕ್ಷ ಶಭಿ ಅಹ್ಮದ್ ಕಾಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News