‘ಕೋವಿಡ್’ ಚಿತ್ರಕಲಾ ಸ್ಪರ್ಧೆಗೆ ಆಹ್ವಾನ

Update: 2020-10-22 16:37 GMT

ಗುರುಪುರ, ಅ. 22: ಮಧುಮೇಹಮುಕ್ತ ಭಾರತ ಅಭಿಯಾನದಡಿ ಗಂಜಿಮಠದ ಆಯುರ್‌ಸ್ಪರ್ಶ್ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ) ಹಾಗೂ ಆಯುರ್‌ಸ್ಪರ್ಶ ಆಯುರ್ವೇದ ಆಸ್ಪತ್ರೆಯ ಜಂಟಿ ಸಹಯೋಗದಲ್ಲಿ ‘ಕೋವಿಡ್-19 ಮತ್ತು ಮಧುಮೇಹ ನಿಯಂತ್ರಣದಲ್ಲಿ ಆಯುರ್ವೇದ’ ಎಂಬ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ನಿಯಮಗಳು : ಡ್ರಾಯಿಂಗ್ ಶೀಟ್‌ನಲ್ಲಿ ಚಿತ್ರಕಲೆ ರಚಿಸಬೇಕು. ಕಲರ್ ಪೈಂಟಿಂಗ್‌ಗೆ ಅವಕಾಶವಿದೆ. ನ.10ರೊಳಗೆ ‘ಆಯುರ್‌ಸ್ಪರ್ಶ್ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ), ಮಳಲಿ ಕ್ರಾಸ್, ಗಂಜಿಮಠ-54144 ಈ ವಿಳಾಸಕ್ಕೆ ಚಿತ್ರಕಲೆ ಕಳುಹಿಸಬೇಕು. ಮಾಹಿತಿಗೆ ಡಾ. ಸತೀಶ್ ಶಂಕರ್ ಬಿ.(948216718) ಅವರನ್ನು ಸಂಪರ್ಕಿಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News