ಹೊನ್ನಾಳ: ಮೀಲಾದುನ್ನಬಿ ಪ್ರಯುಕ್ತ ಶ್ರಮದಾನ
Update: 2020-10-23 13:52 GMT
ಬ್ರಹ್ಮಾವರ, ಅ.23: ಮೀಲಾದುನ್ನಬಿ ಪ್ರಯುಕ್ತ ಎಸ್ಸೆಸೆಫ್ ಹೊನ್ನಾಳ ಘಟಕದ ಕಾರ್ಯಕರ್ತರು, ಜಮಾತ್ ನಾಯಕರು, ಮುಸ್ಲಿಂ ಜಮಾ ಅತ್ ನಾಯಕರು ಸೇರಿ ಅ. 23ರಂದು ಹೊನ್ನಾಳ ಮಸೀದಿಗೆ ಹೋಗುವ ರಸ್ತೆಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.
ಮುಸ್ಲಿಂ ಜಮಾಅತ್ ನಾಯಕ ಸುಭಾನ್ ಅಹಮದ್ ಹೊನ್ನಾಳ ಉಸ್ತುವಾರಿ ಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಎಸ್ಸೆಸೆಫ್ ಅಧ್ಯಕ್ಷ ಇಮ್ತಿಯಾಝ್ ಹೊನ್ನಾಳ, ಕಾರ್ಯ ದರ್ಶಿ ಮುಹಮ್ಮದ್ ಸೈಫ್, ನಾಯಕರಾದ ಮುಹಮ್ಮದ್ ಸಬೀಲ್, ಅರ್ಝಾಕ್, ರಾಹೀದ್, ಸಾಹಿಲ್, ರೇಹಾನ್, ಸುಹಾನ್, ಜುನೈದ್, ತನ್ಝೀಲ್, ಶಾಕೀರ್, ರೇಹಾನ್, ರಿಫಾತ್, ಸಯಾಲ್, ಶೇಹರಾನ್, ಸುಹೇರ್, ಅರ್ಮಾನ್, ಅನೀಮ್, ಆಫ್ವಾನ್, ಸಾಹಿಲ್, ಸುಆದ್, ಮುಆಝ್, ಝೈಬ್ ಮೊದಲಾದವರು ಭಾಗವಹಿಸಿದ್ದರು.