ರಂಗಕರ್ಮಿ ಮೋಹನ ಸೋನರಿಗೆ ನುಡಿ ನಮನ

Update: 2020-10-23 13:53 GMT

ಬ್ರಹ್ಮಾವರ, ಅ.23: ಖ್ಯಾತ ರಂಗಕರ್ಮಿ ಹಾಗೂ ಕಲಾವಿದ ಸೋಣಂಗೇರಿ ಯ ಮೋಹನ ಸೋನ ಅವರಿಗೆ ನುಡಿ ನಮನ ಕಾರ್ಯಕ್ರಮವು ರವಿವಾರ ತೆಂಕುಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಮೋಹನ ಸೋನರ ಭಾವಚಿತ್ರಕ್ಕೆ ಪುಷ್ಪಅರ್ಪಿಸುವುದರ ಮೂಲಕ ಸಿಂಡಿಕೇಟ್ ಬ್ಯಾಂಕಿನ ನಿವೃತ ಮುಖ್ಯ ಪ್ರಬಂಧಕ ಬಿರ್ತಿ ವಿಠಲ ನೆರವೇರಿಸಿದರು. ವಿಟ್ಲ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಕಿರಣ್ ಕುಮಾರ್, ಸೋನರ ವ್ಯಕ್ತಿತ್ವದ ಸ್ಥೂಲ ಪರಿಚಯ ಮಾಡಿದರು.

ಬ್ರಹ್ಮಾವರದ ಉದಯೋನ್ಮುಖ ಕವಿ ವರದರಾಜ್ ಬಿರ್ತಿ, ಸೋನ ಅವರ ಬಹುಮುಖ ವ್ಯಕ್ತಿತ್ವದ ಕುರಿತು ಬರೆದ ಕವಿತೆಯನ್ನು ಅಂಕದ ಮನೆ ಕಲಾವಿದರು ಹಾಡಿದರು. ವಿಜಯ ಬ್ಯಾಂಕ್ ಮುಲ್ಕಿ ಶಾಖೆಯ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್, ಬಿರ್ತಿ ಸುರೇಶ, ಹರೀಶ್ಚಂದ್ರ ಉಪಸ್ಥಿತರಿದ್ದರು. ಶ್ಯಾಮರಾಜ್ ಬಿರ್ತಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಮೋಹನ ಸೋನರ ನೆನಪಿಗಾಗಿ 27 ವರ್ಷಗಳ ಹಿಂದೆ ನಿರ್ದೇಶಿಸಿದ ‘ಗುಬ್ಬಿಯ ಹಸಿವು’ ಮನೆ ಮನೆ ನಾಟಕವನ್ನು ಅಂದು ಆಭಿನಯಿ ಸಿದ ಕಲಾವಿದರೆ ಮತ್ತೊಮ್ಮೆ ಪ್ರದರ್ಶನ ನೀಡಿ, ಸೋನರಿಗೆ ಗೌರವ ಶೃದ್ದಾಂಜಲಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News