ಅಡ್ಯಾರ್ : ವಿದ್ಯುತ್ ಪರಿವರ್ತಕ ಉದ್ಘಾಟನೆ

Update: 2020-10-25 08:12 GMT

ಮಂಗಳೂರು, ಅ. 25: ಅಡ್ಯಾರ್ ಗ್ರಾಪಂ ವ್ಯಾಪ್ತಿಯಲ್ಲಿ 6.71 ಲಕ್ಷ ರೂ.ವೆಚ್ಚದಲ್ಲಿ ವಳಚಿಲ್ ಮತ್ತು ಅರ್ಕುಳ ಬೈಲ್‌ನಲ್ಲಿ ನಿರ್ಮಿಸಲಾದ ಹೆಚ್ಚುವರಿ ವಿದ್ಯುತ್ ಪರಿವರ್ತಕವನ್ನು ಶಾಸಕ ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭ ಬಿಜೆಪಿ ಮುಖಂಡರಾದ ರಘನಾಥ ಪೂಜಾರಿ, ಸಂತೋಷ್ ಕುಮಾರ್ ತುಪ್ಪೆಕಲ್ಲು, ಜಯರಾಮ್ ಶೆಟ್ಟಿಗಾರ್, ಜಗದೀಶ ಅರ್ಕುಳ, ಅಶೋಕ ಕೊಟ್ಟಾರಿ, ಜೆರಾಲ್ಡ್ ಡಿಸೋಜ, ಕೃಷ್ಣ ಅಡ್ಯಾರ್ ಪದವು, ಹರ್ಷಿತ್, ನವೀನ್ ಕೊಟ್ಟಾರಿ, ನ್ಯಾನ್ಸಿ ಡಿಸೋಜ, ಕಿರಣ್ ಪೂಜಾರಿ, ಸುನೀಲ್, ಕಿಶೋರ್, ಗ್ರೇಶನ್ ಡಿಸೋಜ, ಪ್ರಾನ್ಸಿಸ್, ಸುಕುಮಾರ್ ಕರ್ಕೇರ , ಮೆಸ್ಕಾಂ ಎಡಬ್ಲುಡಿ ದಯಾಳ್, ಎಇ ಧರ್ನೇಶ್, ಲೈನ್‌ಮ್ಯಾನ್ ಮನೋಹರ ಭಾಗವಹಿಸಿದ್ದರು.

ಅಶೋಕ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News