ರಂತಡ್ಕ: ನವೀಕೃತ ಮಸೀದಿ ಉದ್ಘಾಟನೆ, ಖಾಝಿ ಸ್ವೀಕಾರ ಸಮಾರಂಭ

Update: 2020-10-26 11:45 GMT

ಬಿ.ಸಿ.ರೋಡ್, ಅ.26: ಬೋಳಿಯಾರು ಸಮೀಪ ರಂತಡ್ಕದ ನವೀಕೃತ ಬದ್ರಿಯ ಜುಮಾ ಮಸೀದಿಯ ಉದ್ಘಾಟನೆ ಹಾಗೂ ಖಾಝಿ ಸ್ವೀಕಾರ ಕಾರ್ಯಕ್ರಮ ರವಿವಾರ ನಡೆಯಿತು.

ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನವೀಕೃತ ಮಸೀದಿಯ ಉದ್ಘಾಟನೆ ಹಾಗೂ ವಕ್ಫ್ ನೆರವೇರಿಸಿದರು.

ರಂತಡ್ಕ ಬಿಜೆಎಂ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು.

ರಂತಡ್ಕ ಖತೀಬ್ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ಪ್ರಸ್ತಾವಗೈದರು. ನಂದಾವರ ಖತೀಬ್ ಸಿದ್ದೀಕ್ ದಾರಿಮಿ ಖಾಝಿ ಸ್ವೀಕಾರದ ಅಗತ್ಯ ಮತ್ತು ಮಹತ್ವದ ಬಗ್ಗೆ ವಿವರಿಸಿದರು. ಇದೇವೇಳೆ ಕೆ.ಪಿ.ಇರ್ಶಾದ್ ದಾರಿಮಿ ಮಿತ್ತಬೈಲು ಅವರು ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರನ್ನು ರಂತಡ್ಕ ಬದ್ರಿಯ ಜುಮಾ ಮಸೀದಿ ಜಮಾಅತ್‌ನ ಖಾಝಿಯನ್ನಾಗಿ ಘೋಷಣೆ ಮಾಡಿದರು.

ಹನೀಫ್ ಹಾಜಿ ಮಂಗಳೂರು, ಅಬ್ದುರ್ರಝಾಕ್ ಹಾಜಿ ಬಿ.ಸಿ.ರೋಡ್, ಹಾಜಿ ಫಕೀರಬ್ಬ ಮಾಸ್ಟರ್, ಸಮದ್ ಹಾಜಿ ಮಂಗಳೂರು, ಹೈದ್ರೋಸ್ ಕುದ್ರೋಳಿ, ಮಜೀದ್ ಫೈಝಿ ನಂದಾವರ, ಕೋಟೆಕ್ಕಣಿ ಖತೀಬ್ ಅನ್ಸಾರುದ್ದೀನ್ ಫೈಝಿ, ರಂತಡ್ಕ ಸದರ್ ಮುಅಲ್ಲಿಂ ಮುಹಮ್ಮದ್ ನವಾಝ್ ಫೈಝಿ, ರಂತಡ್ಕ ಬಿಜೆಎಂ ಉಪಾಧ್ಯಕ್ಷ ಆಸಿಫ್, ಕೋಶಾಧಿಕಾರಿ ಹಸನಬ್ಬ ಹಾಜಿ, ಜೊತೆ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್, ನುಸ್ರತುಲ್ ಮಸಾಕೀನ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್, ಎಸ್‌ವೈಎಸ್ ಅಧ್ಯಕ್ಷ ಎಂ.ಆರ್.ಮುಹಮ್ಮದ್, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇಸಾಕ್ ಮತ್ತಿತರರು ಭಾಗವಹಿಸಿದ್ದರು.

ಮಸೀದಿಯ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಇಬ್ರಾಹೀಂ ಸ್ವಾಗತಿಸಿ, ವಂದಿಸಿದರು. ಮುಝಮ್ಮಿಲ್ ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News