ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಶೇಖರ್ ಕೋಟ್ಯಾನ್

Update: 2020-10-26 13:58 GMT

ಉದ್ಯಾವರ, ಅ.26: ಉದ್ಯಾವರ ಫ್ರೆಂಡ್ಸ್ ಸರ್ಕಲಿನ 2020-21ನೇ ಸಾಲಿನ ಅಧ್ಯಕ್ಷರಾಗಿ ಶೇಖರ್ ಕೆ. ಕೋಟ್ಯಾನ್ ಹಾಗೂ ಪ್ರಧಾನ ಕಾರ್ಯ ದರ್ಶಿಯಾಗಿ ರಿಯಾಝ್ ಪಳ್ಳಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯಗಾರಿವು ಆಸ್ಕರ್ ಫೆರ್ನಾಂಡಿಸ್ ಅವರು ನಿಯುಕ್ತಿಗೊಂಡಿದ್ದಾರೆ.

ಸಂಸ್ಥೆಯ ಇನ್ನಿತರ ಪದಾಧಿಕಾರಿಗಳ ವಿವರ ಹೀಗಿದೆ. ಉಪಾಧ್ಯಕ್ಷರಾಗಿ ಮೇರಿ ಡಿಸೋಜಾ, ಪುಂಡರೀಶ್ ಕುಂದರ್, ಕಾರ್ಯದರ್ಶಿ-ಅನುಪ್ ಕುಮಾರ್, ರವಿಕಿರಣ್ ಪಿ.ಎಸ್., ಕೋಶಾಧಿಕಾರಿ- ಸೋಮಶೇಖರ್ ಸುರತ್ಕಲ್, ಸಾಂಸ್ಕೃತಿಕ ಕಾರ್ಯದರ್ಶಿ-ಶ್ರೀಧರ ಗಣೇಶ್‌ನಗರ, ಸಂಘಟನಾ ಕಾರ್ಯದರ್ಶಿ- ಮಹಮ್ಮದ್ ಆಸಿಫ್, ಪ್ರೇಮ್ ಮಿನೇಜಸ್, ಆಂತರಿಕ ಲೆಕ್ಕಪರಿಶೋಧಕರು- ಹಬೀಬ್ ಪಳ್ಳಿ, ನಿರ್ದೇಶಕರು- ಅಬ್ಬುಲ್ ಜಲೀಲ್ ಸಾಹೇಬ್, ಮಹಮ್ಮದ್ ನಯಾಜ್, ಜಾರ್ಜ್ ಮಿನೇಜಸ್, ಯು. ಪಧ್ಮನಾಭ ಕಾಮತ್, ಚಂದ್ರಾವತಿ ಎಸ್. ಭಂಡಾರಿ, ಶರತ್‌ಕುಮಾರ್, ಉದ್ಯಾವರ ನಾಗೇಶ್‌ ಕುಮಾರ್.

ವಾರ್ಷಿಕ ಮಹಾಸಭೆ: ಸಂಸ್ಥೆಯ 47ನೇ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ತಿಲಕರಾಜ್ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಿತು ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸೋಮಶೇಖರ ಸುರತ್ಕಲ್ ಲೆಕ್ಕಪತ್ರವನ್ನು ಮಂಡಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್ ಮತ್ತು ಶರತ್ ಕುಮಾರ್, ಯು. ಪಧ್ಮನಾಭ ಕಾಮತ್, ಚಂದ್ರಾವತಿ ಎಸ್. ಭಂಡಾರಿ ಉಪಸ್ಥಿತರಿದ್ದರು.

ಸದಸ್ಯರನ್ನು ಉದ್ದೇಶಿಸಿ ಹಿರಿಯ ಸದಸ್ಯರಾದ ಶೇಖರ್ ಕೆ. ಕೋಟ್ಯಾನ್, ಆಬಿದ್ ಆಲಿ. ರಫೀಕ್ ಯೂಸೂಫ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News