ಕೆಲಸಕ್ಕೆಂದು ತೆರಳಿದ್ದ ಯುವತಿಯರು ನಾಪತ್ತೆ

Update: 2020-10-27 15:27 GMT

ಮಂಗಳೂರು, ಅ.27: ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಇಬ್ಬರು ಯುವತಿಯರು ನಾಪತ್ತೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಕಣ್ಣೂರು ನಿವಾಸಿ ಲಕ್ಷ್ಮೀಬಾಯಿ (19), ಶಕ್ತಿ ನಗರದ ರೇಷ್ಮಾ ಡಿಸೋಜ (38) ನಾಪತ್ತೆಯಾದವರು.

ಮೊದಲ ಪ್ರಕರಣದಲ್ಲಿ ಲಕ್ಷ್ಮೀಬಾಯಿ ಅ.18ರಂದು ಕಣ್ಣೂರು ಗ್ರಾಮದ ಬಾಡಿಗೆ ಮನೆಯಿಂದ ಕೆಲಸಕ್ಕೆಂದು ಹೋದವಳು ಮನೆಗೆ ವಾಪಸಾಗದೆ ಕಾಣೆಯಾಗಿದ್ದಾರೆ. 

ಚಹರೆ: ಎತ್ತರ- 5.5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ. ಬಿಳಿ ಟಾಪ್, ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶಾಲು ಧರಿಸಿರುತ್ತಾಳೆ. ಲಂಬಾಣಿ, ಕನ್ನಡ, ತುಳು ಮಾತನಾಡುತ್ತಾರೆ. ಮತ್ತೊಂದು ಪ್ರಕರಣದಲ್ಲಿ ಶಕ್ತಿ ನಗರದ ರೇಷ್ಮಾ ಡಿಸೋಜ ಕೂಡ ಅ.22ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು ನಾಪತ್ತೆಯಾಗಿದ್ದಾರೆ.

ಚಹರೆ: ಎತ್ತರ- 4.5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ. ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸಿದ್ದರು. ಕನ್ನಡ, ಹಿಂದಿ, ಕೊಂಕಣಿ, ಇಂಗ್ಲಿಷ್ ಮಾತನಾಡುತ್ತಾರೆ.

ಯುವತಿಯರ ಬಗ್ಗೆ ಮಾಹಿತಿ ದೊರಕಿದಲ್ಲಿ ಕಂಕನಾಡಿ ನಗರ ಠಾಣೆ (0824- 2220529, 9480805354, 0824-2220800) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News