​ಕಾರು ಢಿಕ್ಕಿ : ಸೈಕಲ್ ಸವಾರ ಮೃತ್ಯು

Update: 2020-10-27 16:13 GMT

ಕೋಟ, ಅ.27: ಕಾರೊಂದು ಡಿಕ್ಕಿ ಹೊಡೆದು ಸೈಕಲ್ ಸವಾರರೊಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ 6:00 ಗಂಟೆ ಸುಮಾರಿಗೆ ಚಿತ್ರಪಾಡಿ ಗ್ರಾಮದ ರಾ.ಹೆದ್ದಾರಿ 66ರ ನಟರಾಜ್ ಬಾರ್ ಎದುರು ನಡೆದಿದೆ.

ಮೃತರನ್ನು ರಾಮ ದೇವಾಡಿಗ (60) ಎಂದು ಗುರುತಿಸಲಾಗಿದೆ.

ರಾಮ ದೇವಾಡಿಗ ತಮ್ಮ ಸೈಕಲ್‌ನಲ್ಲಿ ಕೋಟದ ಕಡೆಯಿಂದ ಸಾಲಿಗ್ರಾಮದ ಕಡೆಗೆ ತೆರಳುತಿದ್ದಾಗ ಉಡುಪಿ ಕಡೆಯಿಂದ ಬಂದ ಕಾರು ವೇಗ ವಾಗಿ ಬಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಸೈಕಲ್ ಸಮೇತ ರಸ್ತೆಯ ಬದಿಗೆ ಬಿದ್ದು ತೀವ್ರವಾಗಿ ಗಾಯಗೊಂಡ ರಾಮ ದೇವಾಡಿಗ ರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರಾಗಲೇ ಮೃತರಾಗಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿದರು.

ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News