ಪಡುಬಿದ್ರಿ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Update: 2020-10-27 16:49 GMT

ಪಡುಬಿದ್ರಿ : ನಾಪ್ತತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

ಪಡುಬಿದ್ರಿಯ ಕಾಳಿಕಾಂಬ ನಿಲಯ, ಬೀಡು ಹಿರೇಬೆಟ್ಟು ಕರೆಯ ಜಗದೀಶ್ ಆಚಾರ್ಯ (58) ಮೃತದೇಹ ಪತ್ತೆಯಾಗಿದೆ. ಇವರು ಪಡುಬಿದ್ರಿಯ ವಿನಾಯಕ ಏಜೆನ್ಸಿಯಲ್ಲಿ ಸೇಲ್ಸ್‍ಮೆನ್ ಕೆಲಸ ಮಾಡಿಕೊಂಡಿದ್ದರು. ಅಕ್ಟೋಬರ್ 17ರಂದು ಬೆಳಗ್ಗೆ ಕೆಲಸಕ್ಕೆಂದು ಹೋದವರು ನಾಪತ್ತೆಯಾ ಗಿದ್ದರು. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News