ಶಿರಾಲಿ ವೆಂಕಟಾಪುರ ನದಿಯಲ್ಲಿ ಮೃತದೇಹ ಪತ್ತೆ

Update: 2020-10-28 10:47 GMT

ಭಟ್ಕಳ : ತಾಲೂಕಿನ ಶಿರಾಲಿ ಗ್ರಾ.ಪಂ ವ್ಯಾಪ್ತಿಯ ವೆಂಕಟಾಪುರ ನದಿಯಲ್ಲಿ ಬುಧವಾರ ಮೃತದೇಹವೊಂದು ಪತ್ತೆಯಾಗಿದೆ.

ವ್ಯಕ್ತಿಯು ಧರಿಸಿದ್ದ ಅಂಗಿ ಕಾಲರ್ ಪಟ್ಟಿಯಲ್ಲಿದ್ದ  ಟೈಲರ್  ಮೊಬೈಲ್ ನಂಬರಿನ ಆಧಾರದಲ್ಲಿ ವ್ಯಕ್ತಿಯ ಪರಿಚಯವನ್ನು ಪತ್ತೆ ಮಾಡಿದ ಭಟ್ಕಳ ಗ್ರಾಮೀಣ ಠಾಣೆಯ ಪಿ.ಎಸ್.ಐ ಬೆಂಗಳೂರಿನ ಪಾದಾರಾಯಪುರದ ನಿವಾಸಿ ಕೆ.ಎಸ್.ಆರ್.ಟಿ.ಸಿ ನಿವೃತ್ತ ಉದ್ಯೋಗಿ ಎಂದು ಗುರುತಿಸಲಾಗಿದೆ.

ಮೃತದೇಹವನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು ಬೆಂಗಳೂರಿನಲ್ಲಿರುವ ಕುಟುಂಬದವರಿಗೆ ಮಾಹಿತಿಯನ್ನು ನೀಡಲಾಗಿದೆ.

ನದಿಯ ದಡದಲ್ಲಿ ವ್ಯಕ್ತಿ ಧರಿಸಿದ್ದ ಉಡುಪು ಇರುವುದುದನ್ನು ಗಮನಿಸಿದ ಸ್ಥಳೀಯರು ನದಿಯಲ್ಲಿ ಮೃತದೇಹ ಇರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಟ್ಕಳದ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿಯ ಕಾರ್ಯಕರ್ತರ ಸಹಾಯದಿಂದ ಗ್ರಾಮೀಣಾ ಪೊಲೀಸರು ಮೃತದೇಹವನ್ನು ನದಿಯಿಂದ ಮೇಲಕ್ಕೆ ತಂದು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News