ದಿಲ್ಲಿ ವಿವಿಯ ಉಪ ಕುಲಪತಿಯನ್ನು ಅಮಾನತುಗೊಳಿಸಿದ ರಾಷ್ಟ್ರಪತಿ

Update: 2020-10-28 12:13 GMT

ಹೊಸದಿಲ್ಲಿ: ನೇಮಕಾತಿಗಳ ವಿವಾದದ ಮಧ್ಯೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಹಿ ಮಾಡಿರುವ  ಆದೇಶದ ಪ್ರಕಾರ ದಿಲ್ಲಿ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಯೋಗೇಶ್ ತ್ಯಾಗಿಯವರನ್ನು ಅಮಾನತುಗೊಳಿಸಲಾಗಿದೆ.

 ಕಳೆದ ವಾರ ವಿಶ್ವ ವಿದ್ಯಾಲಯದಲ್ಲಿ ನಡೆದಿರುವ ಎರಡು ನೇಮಕಾತಿಗಳಿಗೆ ಸಂಬಂಧಿಸಿ ವಿವಾದ ಉಂಟಾದ ಕಾರಣ ರಾಷ್ಟ್ರಪತಿ ಅವರು ಉಪ ಕುಲಪತಿ ವಿರುದ್ದ ವಿಚಾರಣೆಗೆ ಅವಕಾಶ ನೀಡುವಂತೆ ಶಿಕ್ಷಣ ಸಚಿವಾಲಯ ರಾಷ್ಟ್ರಪತಿಯವರನ್ನು ಕೇಳಿಕೊಂಡಿತ್ತು. ಮಂಗಳವಾರ ರಾಷ್ಟ್ರಪತಿ ಅವರು ಉಪ ಕುಲಪತಿ ವಿರುದ್ಧ ವಿಚಾರಣೆಗೆ ಅವಕಾಶ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News