‘ಸೆಕ್ಯೂರ್ ವಾಟರ್ಸ್’ ಮಳಿಗೆ ಶುಭಾರಂಭ

Update: 2020-10-28 16:38 GMT

ಮಂಗಳೂರು, ಅ.28: ಸೆಕ್ಯೂರ್ ವಾಟರ್ಸ್ ಫಾರ್ ರೆಸಿಡೆನ್ಷಿಯಲ್, ಕಮರ್ಷಿಯಲ್, ಇಂಡಸ್ಟ್ರಿಯಲ್‌ನ ಮಳಿಗೆಯು ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಅಮ್ಮ ಇಲೆಕ್ಟ್ರಾನಿಕ್ಸ್ ಸಮೀಪದ ಶಿಫಾ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಶುಭಾರಂಭಗೊಂಡಿತು. ಸಂಸ್ಥೆಯ ಮಾಲಕರ ತಾಯಿ ಬಿಫಾತಿಮ ಮಳಿಗೆ ಉದ್ಘಾಟಿಸಿದರು.

ಗೌರವ ಅತಿಥಿಗಳಾಗಿ ಮಂಗಳೂರು ಇಮಾಮ್ ನೂರು ಮಸೀದಿಯ ಖತೀಬ ಯೂಸುಫ್ ಖಾಸಿಮಿ, ಉಳ್ಳಾಲ ಸೈಯದ್ ಮದನಿ ದರ್ಗಾ ಇಮಾಮ್ ಅನ್ವರ್ ಆಲಿ ದಾರಿಮಿ, ಕನ್ಯಾನ ಎಚ್. ಕೆ.ಜೆ.ಎಂ. ಮಸೀದಿಯ ಅಧ್ಯಕ್ಷ ಸುಲೈಮಾನ್ ಫೈಝಿ ದುಆ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಪರಿಶುದ್ಧ ನೀರಿನಿಂದ ಉತ್ತಮ ಆರೋಗ್ಯ ದೊರೆಯಲಿದೆ. ತಳಮಟ್ಟದವರಿಗೂ ಪರಿಶುದ್ಧ ನೀರು ಪೂರೈಸುವ ಯಂತ್ರಗಳು ಸಿಗುವಂತಾಗಬೇಕು. ಸರ್ವಿಸ್ ವ್ಯವಸ್ಥೆ ಪರಿಣಾಮಕಾರಿ ಯಾಗಿ ಜಾರಿ ಮಾಡಿದಲ್ಲಿ ಸಂಸ್ಥೆಯು ಬೆಳವಣಿಗೆಯಾಗಲಿದೆ ಎಂದರು.

ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ಸಿಪ್ರಿಯನ್ ಪಿಂಟೋ ಮಾತನಾಡಿ, ಸಕಲ ಜೀವರಾಶಿಗೂ ನೀರು ಅಗತ್ಯ. ಸ್ವಚ್ಛ ನೀರು ಪಡೆಯುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ತೊಕ್ಕೊಟ್ಟುವಿನಲ್ಲಿ ‘ಸೆಕ್ಯೂರ್ ವಾಟರ್ಸ್’ ಸೇವೆ ಆರಂಭಗೊಂಡಿರುವುದು ಈ ಭಾಗದ ಜನರಿಗೆ ಹೆಮ್ಮೆಯ ವಿಚಾರ. ಜನರು ಸೇವೆಯ ಲಾಭ ಪಡೆಯುವಂತಾಗಲಿ ಎಂದು ಹೇಳಿದರು.

ರಾಜರಾಜೇಶ್ವರಿ ದೇವಸ್ಥಾನದ ಅರ್ಚಕ ಗಣೇಶ್ ಭಟ್ ಮಾತನಾಡಿ, ಸೆಕ್ಯೂರ್ ವಾಟರ್ಸ್ ಸಂಸ್ಥೆಯಿಂದ ಹೊಸ ತಂತ್ರಜ್ಞಾನ ಅಳವಡಿಸುವ ವ್ಯವಸ್ಥೆಯಾಗಿದೆ. ಸಂಸ್ಥೆಯು ತನ್ನ ಸೇವೆಯನ್ನು ಮುಂದುವರಿಸಿದ್ದಲ್ಲಿ ಜನರಿಗೆ ಅನುಕೂಲವಾಗಲಿದೆ. ತೊಕ್ಕೊಟ್ಟು ಪ್ರದೇಶಕ್ಕೆ ಪರಿಶುದ್ಧ ನೀರು ಅಗತ್ಯವಾಗಿ ಬೇಕಿದೆ ಎಂದರು.

ಗೌರವ ಅತಿಥಿಗಳಾಗಿ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆ ಪ್ರಬಂಧಕ ಅರುಣ್ ಪ್ರಭಾ ಕೆ.ಎಸ್., ಆಧುನಿಕ್ ಹ್ಯೂಮನ್ ರೈಟ್ಸ್ ಕಮಿಟಿ ಇಂಡಿಯಾ ಅಧ್ಯಕ್ಷೆ ಹಸೀನಾ, ಎಂಎನ್‌ಜಿ ಫೌಂಡೇಶನ್ ಮತ್ತು ಡೌರಿ ಫ್ರೀ ನಿಖಾಹ್ ಇದರ ಇಲ್ಯಾಸ್ ಮಂಗಳೂರು, ಸುಲ್ತಾನ್ ಬಿಲ್ಡರ್ಸ್‌ನ ಮುಹಮ್ಮದ್ ಯು.ಬಿ., ಬೆಂಗಳೂರಿನ ಎಕ್ಸ್‌ಟೆನ್ ಇಂಟರ್ ನ್ಯಾಷನಲ್ ಎಲ್‌ಎಲ್‌ಪಿನ ದಾವುದ್, ದೇರಳಕಟ್ಟೆಯ ಮಲಬಾರ್ ಕ್ಲೇ ಇದರ ಮುಹಮ್ಮದ್ ಅಶ್ರಫ್, ಮುಹಮ್ಮದ್ ಹಾರಿಸ್, ತೊಕ್ಕೊಟ್ಟು ಸುಪರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಖಲಂದರ್, ಬೆಂಗಳೂರಿನ ಗ್ಲೋಬಲ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ ಇರ್ಫಾನ್, ರೋಷನ್ ಸುರತ್ಕಲ್, ಬೈತಾರ್ ಉಸ್ಮಾನ್ ತೊಕ್ಕೊಟ್ಟು, ತಾಂತ್ರಿಕ ಸಹಾಯಕರಾದ ಇಸ್ಮಾಯಿಲ್ ಬಾವಾ, ಇಬ್ರಾಹಿಂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕ ಸಲೀಂ ಸ್ವಾಗತಿಸಿದರು. ಎಂಎನ್‌ಜಿ ಫೌಂಡೇಶನ್‌ನ ಇಮ್ತಿಯಾಝ್ ಕೆದಂಬಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News