ನಿರ್ಗತಿಕರಿಗೆ ಊಟ ನೀಡುವ ಮೂಲಕ ಮೀಲಾದುನ್ನಬಿ ಆಚರಣೆ
Update: 2020-10-29 15:56 GMT
ಉಡುಪಿ, ಅ.29: ಉಡುಪಿ ಹಾಗೂ ಪಡುಬಿದ್ರಿಯ ಸಮಾನ ಮನಸ್ಕರು ಇಂದು ಬಡವರು, ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಒಂದು ಹೊತ್ತಿನ ಊಟ ವಿತರಿಸುವ ಮೂಲಕ ಮೀಲಾದುನ್ನಬಿಯನ್ನು ವಿಶಿಷ್ಟವಾಗಿ ಆಚರಿಸಿದರು.
ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್, ಅಮೀರ್ ಪಡುಬಿದ್ರಿ, ಸೈಯದ್ ನಿಜಾಮುದ್ದೀನ್ ಹಾಗೂ ಅವರ ತಂಡದ ಸುಮಾರು ಇಪ್ಪತ್ತಕ್ಕೂ ಅಧಿಕ ಮಂದಿ ಸೇರಿಕೊಂಡು ತಯಾರಿಸಿದ 600 ಊಟದ ಪೊಟ್ಟಣಗಳನ್ನು ಪಡುಬಿದ್ರಿಯಿಂದ ಬ್ರಹ್ಮಾವರದವರೆಗೆ ದಾರಿಬದಿಯಲ್ಲಿ ಕಾಣ ಸಿಕ್ಕ ನಿರ್ಗತಿಕರು, ಭಿಕ್ಷುಕರು ಹಾಗೂ ಹಸಿದವರಿಗೆ ವಿತರಿಸಲಾಯಿತು. ಮಧ್ಯಾಹ್ನದ ಊಟವನ್ನು ಬೀಡಿನಗುಡ್ಡೆ ನಿರ್ಗತಿಕರ ಕೇಂದ್ರದಲ್ಲಿ ವಾಸವಾಗಿ ರುವ ಸರೋಜಮ್ಮನ ಜೊತೆ ಕುಳಿತುಕೊಂಡು ಮಾಡಲಾಯಿತು.