ವಾಗ್ಷಾದ ಕೆ.ತಿರುಗೆ ‘ಅತ್ಯುತ್ತಮ ಪ್ರಿನ್ಸಿಪಾಲ್’ ಪ್ರಶಸ್ತಿ

Update: 2020-10-29 16:33 GMT

ಉಡುಪಿ, ಅ.29: ಮಣಿಪಾಲ ಮಾಹೆಯ ಆಡಳಿತಕ್ಕೊಳಪಟ್ಟ ವೆಲ್‌ಕಮ್ ಗ್ರೂಫ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಷ್ಟ್ರೇಶನ್ (ವಾಗ್ಷಾ)ದ ಪ್ರಿನ್ಸಿಪಾಲ್ ಹಾಗೂ ಸಂಸ್ಥೆಯ ಮುಖ್ಯಸ್ಥರಾಗಿರುವ ಚೆಫ್ ಕೆ.ತಿರುಘ್ನಾನ ಸಂಬಂಧನ್ ಅವರು ಚಂಡೀಗಢದ ಇಂಟರ್‌ನೇಷನಲ್ ಚೇಂಬರ್ ಆಫ್ ಸರ್ವಿಸ್ ಇಂಡಸ್ಟ್ರೀಸ್‌ನಿಂದ ‘ಅತ್ಯುತ್ತಮ ಪ್ರಿನ್ಸಿಪಾಲ್’ ಆಗಿ ಆಯ್ಕೆಯಾಗಿ ಗ್ಲೋಬಲ್ ಎಜ್ಯುಕೇಷನ್ ಸ್ಕಿಲ್ಸ್ ಎಂಎಸ್‌ಎಂಇ ಎಂಡ್ ಎಂಟರ್ ಪ್ರನ್ಯೂರ್‌ಶಿಪ್ ಸಮ್ಮಿಟ್ ಲೀಡರ್‌ಶಿಪ್ ಎವಾರ್ಡ್-2020ನ್ನು ಪಡೆದಿದ್ದಾರೆ.

ಶಿಕ್ಷಕರ ದಿನಾಚರಣೆಯ ಸಂಬಂಧವಾಗಿ ನಡೆದ ಕಾರ್ಯಕ್ರಮದಲ್ಲಿ ಚೆಫ್ ಕೆ.ತಿರು ಅವರು ಈ ಪ್ರಶಸ್ತಿಯನ್ನು ಪಡೆದರು. ಅಲ್ಲದೇ ವೆಬ್‌ನಾರ್‌ನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾಡಿದ ದಿಕ್ಸೂಚಿ ಭಾಷಣವೂ ಪ್ರಶಂಸಾ ಪತ್ರವನ್ನು ಪಡೆದಿದೆ. ಅವರು ‘ಜೀವನ ನಿರ್ವಹಣೆ ಕೌಶಲ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ್ದರು.

ಚೆಫ್ ಕೆ.ತಿರು ಅವರು ತಮಗೆ ದೊರೆತ ಪ್ರಶಸ್ತಿಯ ಕುರಿತು ಹರ್ಷ ವ್ಯಕ್ತಪಡಿಸಿ, ತನಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News