ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಮತ್ತೆ ಅಪಘಾತ: ಬೈಕ್ ಸವಾರ ಪಾರು

Update: 2020-10-29 17:21 GMT

ಉಳ್ಳಾಲ: ಇಲ್ಲಿನ ಫ್ಲೈ ಓವರ್ ನಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ ಬಳಿಕ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಬದಲಾದ ಸಂಚಾರ ವ್ಯವಸ್ಥೆಯಲ್ಲೂ ಅಪಘಾತ ಸಂಭವಿಸಿದೆ.

ಇಲ್ಲಿನ ಕಾಪಿಕಾಡ್ ತಿರುವಿನಲ್ಲಿ ಬುಲೆಟ್ ಬೈಕ್ ಬಸ್ಸಿನಡಿಗೆ ಬಿದ್ದಿದ್ದು, ಬುಲೆಟ್ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
ಮುಂಬೈಯಿಂದ ಬಂದ ಮೌಷೂಕ್ ಎಂಬವರು ಬುಲೆಟ್ ಮೂಲಕ ಕೇರಳಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಉಳ್ಳಾಲಕ್ಕೆ ತೆರಳುವ ಬಸ್ ಢಿಕ್ಕಿ ಹೊಡೆದಿದೆ.

ಬದಲಾದ ಸಂಚಾರ ವ್ಯವಸ್ಥೆಯಲ್ಲೂ ಅಪಘಾತ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News