ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ಉದ್ಘಾಟನೆ

Update: 2020-10-30 14:05 GMT

ಉಡುಪಿ, ಅ.30: ಕಿದಿಯೂರು ಶ್ರೀವಿದ್ಯಾಸಮುದ್ರ ತೀರ್ಥ ಪ್ರೌಢ ಶಾಲೆಯ ಸಭಾಂಗಣದಲ್ಲಿ ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್‌ನ್ನು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್, ಸಮೂಹದ ನಿರ್ದೇಶಕ ಪ್ರೊ.ಉದ್ಯಾವರ ಮಾಧವ ಆಚಾರ್ಯ ಶುಭಾಶಂಸನೆಗೈದರು. ಪ್ರೊ.ಎಂ.ಎಲ್.ಸಾಮಗ, ಮುರಲಿ ಕಡೆಕಾರ್, ಎಂ.ಕೆ.ರಮೇಶ್ ಆಚಾರ್ಯ, ಉದಯ ಕುಮಾರ್ ಶೆಟ್ಟಿ, ಹಿರಿ ಯಪ್ಪ ಕೋಟ್ಯಾನ್, ಗುಂಡು ಬಿ.ಅಮೀನ್, ಪ್ರೊ.ರಾಧಾಕೃಷ್ಣ ಆಚಾರ್ಯ, ನಂದ ಕುಮಾರ್ ಮಾತನಾಡಿದರು.

ಮ್ಯಾನೇಜಿಂಗ್ ಟ್ರಸ್ಟಿ ಕೆ.ಜೆ.ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತ ನಾಡಿ, ಸ್ವಾಗತಿಸಿದರು. ಟ್ರಸ್ಟಿಗಳಾದ ಕೆ.ಜೆ.ಕೃಷ್ಣ, ಕೆ.ಜೆ.ಸುಧೀಂದ್ರ ಉಪಸ್ಥಿತರಿ ದ್ದರು. ಕೆ.ಜಗದೀಶ್ ಆಚಾರ್ಯ ವಂದಿಸಿದರು. ಎನ್.ಆರ್.ದಾಮೋದರ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೆ.ಜೆ. ಸಹೋದರ ರಿಂದ ಯಕ್ಷಗಾಯನ ನಡೆಯಿತು. ಪ್ರತಿಮಾ ಮತ್ತು ಮಾನ್ಯ ಪೀಠಿಕಾ ಸ್ತ್ರೀವೇಷ ನೃತ್ಯ ಅಭಿನಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News