ವಿಮಾ ಪರಿಹಾರ ಮೊತ್ತ 15 ಲಕ್ಷ ರೂ. ವಿತರಣೆ

Update: 2020-10-30 14:23 GMT

ಉಡುಪಿ, ಅ.30: ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಸುಧಾಕರ ಎಂಬವರ ಸ್ಕೂಟರಿಗೆ ಉಡುಪಿಯ ಬಡಗಬೆಟ್ಟು ಸೊಸೈಟಿಯು ವಿಮೆ ಮಾಡಿದ್ದು, ಈ ಪಾಲಿಸಿಯಡಿ ಉಡುಪಿಯ ಓರಿಯಂಟಲ್ ವಿಮಾ ಕಂಪೆನಿಯ ಕಾನೂನು ಘಟಕದ ವತಿಯಿಂದ ಮೃತರ ವಾರಿಸುದಾರ ಪತ್ನಿ ಹರಿಣಾಕ್ಷಿಯವರಿಗೆ ನೇರವಾಗಿ ಸಂಸ್ಥೆಯ ವತಿಯಿಂದ ವಿಮಾ ಪರಿಹಾರ ಮೊತ್ತ 15 ಲಕ್ಷ ರೂ.ವನ್ನು ಇಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಓರಿಯಂಟಲ್ ವಿಮಾ ಕಂಪೆನಿಯ ಕಾನೂನು ಘಟಕದ ಮುಖ್ಯಸ್ಥ ಎಂ.ಗೋಪಿಕೃಷ್ಣ ರಾವ್, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಎಸ್. ಉಪಸ್ಥಿತರಿದ್ಧರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News