ಬೆಳ್ತಂಗಡಿ: ಪಾರ್ಕಿಂಗ್ ಮಾಡಿದ್ದ ಕಾರಿನಲ್ಲಿ ನಾಗರಹಾವು ಪತ್ತೆ !

Update: 2020-10-30 14:43 GMT

ಬೆಳ್ತಂಗಡಿ: ಪಾರ್ಕಿಂಗ್ ಮಾಡಿದ್ದ ಕಾರಿನಲ್ಲಿ ನಾಗರಹಾವು ಪತ್ತೆಯಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳ್ತಂಗಡಿಯಲ್ಲಿ ಶುಕ್ರವಾರ ನಡೆದಿದೆ.

ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿಗಳಾದ ಪ್ರವಿಣ್ ಮತ್ತು ಮೀನಾ ದಂಪತಿ ತಮ್ಮ ಪುತ್ರ ನೊಂದಿಗೆ ಕಾರಿನಲ್ಲಿ ಪ್ರಯಾಣಿಸುತಿದ್ದ ಸಂದರ್ಭ ಬೆಳ್ತಂಗಡಿ ಡ್ರಗ್ ಹೌಸ್ ಮುಂಭಾಗದಲ್ಲಿ ಕಾರು ಪಾರ್ಕಿಂಗ್ ಮಾಡಿ, ಔಷಧ ಖರೀದಿಸಿ ಹಿಂದಿರುಗುವ ಸಂದರ್ಭ ಕಾರಿನ ಸೀಟಿನ ಕೆಳಭಾಗದಲ್ಲಿದ್ದ ನಾಗರಹಾವನ್ನು ಕಂಡು ಭಯಭೀತರಾಗಿದ್ದಾರೆ.

ಮಾಹಿತಿ ಅರಿತು ಸ್ಥಳಕ್ಕೆ ಧಾವಿಸಿದ ಉಜಿರೆಯ ಸ್ನೇಕ್ ಜೋಯ್ ಅವರು ಸೂಕ್ತ ಕಾರ್ಯಾಚರಣೆ ನಡೆಸಿ ನಾಗರ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಹಾವನ್ನು ಕಾಡಿಗೆ ಬಿಟ್ಟಿದ್ದಾರೆ. ಕಾರಿಗೆ ಹತ್ತುವ ಮೊದಲು ಅವರು ಹಾವನ್ನು ಗಮನಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News