ತೊಕ್ಕೊಟ್ಟು: ಸೌಹಾರ್ದ ಸಮ್ಮಿಲನ ಕಾರ್ಯಕ್ರಮ

Update: 2020-10-31 17:13 GMT

ಉಳ್ಳಾಲ: ಈ ಜಗತ್ತಿಗೆ ಅನೇಕ ಪ್ರವಾದಿಗಳು, ಮಹಾಪುರುಷರು ಬಂದು ಹೋಗಿದ್ದಾರೆ. ಕೆಲವರು ಕೆಲವು ಧರ್ಮ ಗಳಿಗೆ ಸೀಮಿತ ರಾಗಿದ್ದಾರೆ. ಇವರು ಕೇವಲ ಒಂದು ವರ್ಗಕ್ಕೆ ಸೀಮಿತ ರಾಗಬೇಕಾದವರಲ್ಲ. ಈ ಜಗತ್ತು ಕಂಡ ಅತ್ಯಂತ ದೊಡ್ಡ ಮಾರ್ಗದರ್ಶಕ , ಮೇಧಾವಿ ಪ್ರವಾದಿ ಮುಹಮ್ಮದ್ ಆಗಿದ್ದಾರೆ ಎಂದು  ಡಾ.ಮುಹಮ್ಮದ್ ಮುಬೀನ್ ಹೇಳಿದರು.

ಅವರು ಸದ್ಭಾವನಾ ವೇದಿಕೆ ಉಳ್ಳಾಲ ಇದರ ಆಶ್ರಯದಲ್ಲಿ ತೊಕ್ಕೊಟ್ಟು ವಿನಲ್ಲಿ ಶುಕ್ರವಾರ ನಡೆದ ಪ್ರವಾದಿ ಮುಹಮ್ಮದ್ ಮಾನವತೆಯ ಮಾರ್ಗ ದರ್ಶಕ, ಸೌಹಾರ್ದ ಸಮ್ಮಿಲನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಸದ್ಭಾವನಾ ವೇದಿಕೆ ಕಾರ್ಯದರ್ಶಿ ಮುಹಮ್ಮದ್ ಅನ್ವರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷ ಜೋಸ್ಲಿನ್ ಡಿ ಸೋಜ, ಸದಸ್ಯ ಉಮ್ಮರ್ ಪಜೀರ್ ಪ್ರವಾದಿ ಮುಹಮ್ಮದ್ ಮಾನವತೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಕೃಷ್ಣ ಗಟ್ಟಿ ಉಪಸ್ಥಿತರಿದ್ದರು. ಸದಸ್ಯ ಅಬ್ದುಲ್ ಕರೀಂ ಕಾರ್ಯಕ್ರಮ ನಿರೂಪಿಸಿದರು.ಮೆಲ್ವಿನ್ ಡಿ ಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News