ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಸಮಿತಿ ಅಸ್ತಿತ್ವಕ್ಕೆ

Update: 2020-11-01 15:28 GMT

ಮಂಗಳೂರು, ನ.1: ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆಯ ಮಂಗಳೂರು ತಾಲೂಕು ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಕಾಟಿಪಳ್ಳ ಮಿಸ್ಬಾಹ್ ಕಾಲೇಜು ಮಿಸ್ಬಾಹ್ ಆಡಿಟೋರಿಯಂನಲ್ಲಿ ರವಿವಾರ ಜರಗಿದ್ದು, ಮಂಗಳೂರು ತಾಲೂಕು ಸಮಿತಿ ಅಸ್ತಿತ್ವಕ್ಕೆ ತರಲಾಯಿತು.

ಸಭೆಯನ್ನು ರಾಜ್ಯ ಉಪಾಧ್ಯಕ್ಷ ಎಚ್.ಐ. ಅಬೂಸುಫ್ಯಾನ್ ಮದನಿ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ. ಶಾಫಿ ಸಅದಿ ಬೆಂಗಳೂರು, ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ ವಿಷಯ ಮಂಡಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್‌ ಅಲಿ ಪ್ರಾಸ್ತಾವಿಕವಾಗಿ ಮಾತಾಡಿದರು.

ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಇಸ್ಮಾಯಿಲ್ ಸಅದಿ ಕಿನ್ಯ, ಸಾದಿಕ್ ಮಾಸ್ಟರ್, ಕೆಸಿಎಫ್ ನಾಯಕ ನಝೀರ್ ಕಾಶಿಪಟ್ನ ಭಾಗವಹಿಸಿದ್ದರು. ನಂತರ ನೂತನ ಸಮಿತಿಗೆ ಅಧ್ಯಕ್ಷರಾಗಿ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮೇಯರ್ ಕೆ. ಅಶ್ರಫ್, ಕೋಶಾಧಿಕಾರಿಯಾಗಿ ಬಿ.ಎ ಇಕ್ಬಾಲ್, ಉಪಾಧ್ಯಕ್ಷರಾಗಿ ಕೆ.ಎಲ್. ಬದ್ರುದ್ದೀನ್ ಹಾಜಿ ಬಜ್ಪೆ, ಕಂದಕ್‌ ಕಾರ್ಪೊರೇಟರ್ ಅಬ್ದುಲ್ ಲತೀಫ್, ಸತ್ತಾರ್ ಕೃಷ್ಣಾಪುರ, ಬಶೀರ್ ಹಾಜಿ ಮೆಘಾ, ಬೈಕಂಪಾಡಿಯ ನ್ಯಾಯವಾದಿ ಮುಕ್ತಾರ್ ಅಹ್ಮದ್ ಆಯ್ಕೆಯಾದರು.

ಕಾರ್ಯದರ್ಶಿಗಳಾಗಿ ಅಬ್ದುಲ್ ಹಮೀದ್ ಸುರತ್ಕಲ್, ಇಲ್ಯಾಸ್ ನೂರುಲ್ ಹುದಾ, ಉಸ್ಮಾನ್ ಪಿ.ಎಂ, ನಝೀರ್ ಬಜಾಲ್, ಅಬ್ದುಲ್ಲ ವೆನ್ಜ್, ಅಬೂಬಕರ್ ಕುಳಾಯಿ, ಸೈಪುಲ್ಲ ಕಾಟಿಪಳ್ಳ, ಹಕೀಂ ಪಾಲ್ಕಾನ್, ಕೋ-ಆರ್ಡಿನೇಟರ್‌ಗಳಾಗಿ ಬಾವ ಪಕ್ರುದ್ದೀನ್, ಅದ್ದು ಹಾಜಿ ಪ್ರಿಂಟೆಕ್, ಮುಹಮ್ಮದ್ ಸಾಲಿ ಬಜ್ಪೆ, ಹರ್ಷಾದ್ ಕಂದಕ್, ಸೈದುದ್ದೀನ್ ಬೈಕಂಪಾಡಿ, ಸೈಪುಲ್ಲಾ ಕಾಟಿಪಳ್ಳ, ಸದಸ್ಯರಾಗಿ ಅಶ್ರಫ್ ಕಾನ, ಸಲೀಂ ಅಡ್ಯಾರ್, ಹಸನಬ್ನ ಹಾಜಿ ಜೆಪ್ಪು, ಸಫ್ವಾನ್ ಸುಪ್ರೀಂ, ಬಶೀರ್ ಎಕ್ಕೂರು, ಹಮೀದ್ ಬೋಂದೆಲ್, ಅಮೀರ್ ಸುರತ್ಕಲ್, ಮೊಹ್ದಿನ್ ಅಲ್ ಸಫರ್, ಬಿ.ಕೆ.ಹಿದಾಯಿತ್ ಕೃಷ್ಣಾಪುರ, ಮನ್ಸೂರ್ ವೆಲ್‌ಕಂ, ಬಶೀರ್ 4ನೇ ಬ್ಲಾಕ್, ಅಬೂಬಕರ್ ಕಾಟಿಪಳ್ಳ, ಪಿ.ಕೆ. ಮೊಹಿಯ್ಯುದ್ದೀನ್ 2ನೇ ಬ್ಲಾಕ್, ಆಸಿಫ್ ಅಡ್ಯಾರ್, ಹಸನ್ ಶರೀಫ್ ಕಾಟಿಪಳ್ಳ, ಫಾರೂಕ್ ಕಾವೂರು, ಮುಹಮ್ಮದ್ ರಫೀಕ್ ಪಡೀಲ್, ಅಬ್ದುಲ್ ರಝಾಕ್ ಕಣ್ಣೂರು, ಶಂಸುದ್ದೀನ್ ಕಂಡತ್ ಪಳ್ಳಿ, ಇಬ್ರಾಹಿಮ್ ಅತ್ರಬೈಲ್, ಬಾವ ಮರವೂರು, ರಿಯಾಝ್ ಸೂರಿಂಜೆ, ರಝಾಕ್ ಕೋಟೆ, ಸಫ್ವಾನ್ ಸುಪ್ರೀಂ, ರಿಫಾತ್ ಎಸ್.ಎಂ.ಆರ್., ಸಾದಿಕ್ ಸೂರಿಂಜೆ ಅವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಕೋ-ಆರ್ಡಿನೇಟರ್ ಅಶ್ರಫ್ ಕಿನಾರ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News