ಕೊಣಾಜೆ: ರಾಜ್ಯೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

Update: 2020-11-02 10:11 GMT

ಕೊಣಾಜೆ: ಮಂಗಳ ಗ್ರಾಮೀಣ ಯುವಕ ಸಂಘ ಕೊಣಾಜೆ ಹಾಗೂ ಖಿದ್ಮತುಲ್ ಇಸ್ಲಾಂ ಎಸೋಸಿಯೇಶನ್, ಕೋಡಿಜಾಲ್  ಇದರ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪರಿಸರ ಸ್ವಚ್ಛತೆ ಕಾರ್ಯಕ್ರಮದ ಮೂಲಕ ಕೊಣಾಜೆ ಗ್ರಾಮ ಪಂಚಾಯತ್ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ರಸ್ತೆ ಇಕ್ಕೆಲಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಯುವಕ ಸಂಘದ ಅಧ್ಯಕ್ಷ  ಕೆ.ಎಮ್ ಅಬ್ದುಲ್ ರಹಿಮಾನ್, ಖಿದ್ಮತುಲ್ ಇಸ್ಲಾಂ ಎಸೋಸಿಯೇಶನ್ ಅಧ್ಯಕ್ಷ ಅಮೀರ್ ಕೋಡಿಜಾಲ್, ಯುವಕ ಸಂಘದ ಮಾಜಿ ಅಧ್ಯಕ್ಷರಾದ ಅಬ್ದುನ್ನಾಸಿರ್ ಕೆ.ಕೆ, ಅಚ್ಚುತ ಗಟ್ಟಿ, ಸಮಾಜ ಸೇವಕರಾದ ಇಕ್ಬಾಲ್ ಕೊಣಾಜೆ, ಅಬ್ದುಲ್ಲಾ, ಉಪಾಧ್ಯಕ್ಷ ದಯಾನಂದ ಗಟ್ಟಿ, ಕಾರ್ಯದರ್ಶಿ ಮುಹಮ್ಮದ್ ಅಶ್ರಫ್, ಕೋಶಾಧಿಕಾರಿ ಹಬೀಬ್, ಸಾಂಸ್ಕೃತಿಕ ಕಾರ್ಯದರ್ಶಿ ಹಮೀದ್, ಖಿದ್ಮತುಲ್ ಇಸ್ಲಾಂ ಎಸೋಸಿಯೇಶನ್ ಕಾರ್ಯದರ್ಶಿ ಶರೀಫ್, ಉಪಾಧ್ಯಕ್ಷ ಅಬ್ಧುಲ್ ಲತೀಫ್ , ಸಂಘಟನೆಯ ಪದಾಧಿಕಾರಿಗಳಾದ ರಿಯಾಝ್, ಇಬ್ರಾಹಿಂ ಕೆ.ಎಂ, ಅಝರುದ್ದೀನ್, ಜಿ.ಪಿ ಖಾದರ್, ರಾಮಚಂದ್ರ, ಸೂಫಿ ಇಬ್ರಾಹಿಂ, ಆಸಿಫ್, ಶಮೀರ್, ರಹ್ಮಾನ್ ಕೊಣಾಜೆ, ಮುಹಮ್ಮದ್ ಕೊಣಾಜೆ, ನಝೀರ್, ಹಾರಿಸ್, ಇಮ್ತಿಯಾಝ್ ಹಾಗೂ ಇನ್ನಿತರ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News