ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಅಧ್ಯಕ್ಷರಾಗಿ ಭಾಸ್ಕರ್ ಕಾಮತ್
Update: 2020-11-04 18:45 IST
ಉಡುಪಿ, ನ.4: ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಉಡುಪಿ ಇದರ ನೂತನ ಪದಾಧಿಕಾರಿಗಳ ಚುನಾವಣೆ ಇತ್ತೀಚೆಗೆ ನಡೆಯಿತು. ಒಕ್ಕೂಟದ ಅಧ್ಯಕ್ಷರಾಗಿ ಬಿ.ಭಾಸ್ಕರ ಕಾಮತ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಬಿ.ಮಧುಸೂದನ ನಾಯಕ್ ಮತ್ತು ನಿರ್ದೇಶಕರಾಗಿ ಮಂಜುನಾಥ ಎಸ್.ಕೆ, ಗಿರೀಶ್ ಪೈ ಬಿ., ಎಂ. ವಿನಾಯಕ್ ರಾವ್, ವಿಜಯ ಕೆ, ಬಿ.ಸದಾಶಿವ ಶೆಟ್ಟಿ, ಸುಧೀಶ್ ನಾಯಕ್, ಸುಧಾಕರ್ ಕೆ. ಮೂಳೂರು, ವಿವೇಕ್ ಯು, ಬಿ.ಎಚ್. ಶೆಟ್ಟಿಗಾರ್, ರಾಜೀವ್ ಕೋಟ್ಯಾನ್, ಅಶೋಕ್ ಪ್ರಭು, ನೇಮಿರಾಜ ಆರಿಗ, ಪಿ. ಜಗನಾಥ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾದ ಲಕ್ಷ್ಮೀನಾರಾಯಣ ಆರ್ ನಾಯ್ಕ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟಿರು ಎಂದು ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಮುಖ್ಯಕಾರ್ಯನಿರ್ವಹಣಾಧಿಕಾರಿ ಲೋಹಿತ್ ಜಿ ಸಾಲಿಯನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.