×
Ad

ಹೊಟೇಲ್ ಕೆಲಸಕ್ಕೆ ಹೋದ ಯುವಕ ನಾಪತ್ತೆ

Update: 2020-11-04 21:59 IST

ಬೆಳ್ತಂಗಡಿ : ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ನವಗ್ರಾಮದ ನಿವಾಸಿ ಮಹಮ್ಮದ್‌ ಉನೈಝ್ (21)  ಅ. 23 ರಂದು ಹೋಟೆಲ್‌ ಗೆ ಕೆಲಸಕ್ಕೆಂದು ಹೋದವನು ವಾಪಾಸು ಮನೆಗೆ ಬಾರದೇ, ಕಾಣೆಯಾಗಿರುವುದಾಗಿ ದೂರು ದಾಖಲಾಗಿದೆ.

ಅಲ್ಲದೆ ಘಟನೆಯ ಬಳಿಕ ಆತನ‌ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ‌.  ಮನೆಯವರು ನೀಡಿರುವ ದೂರಿನಂತೆ ಪೂಂಜಾಲಕಟ್ಟೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News