‘ಹೊಟೇಲ್ ಮಣಿಪಾಲ್ ಇನ್’ನಲ್ಲಿ ‘ಉಡುಪಿ ರಸೋಯಿ’ ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ಶುಭಾರಂಭ

Update: 2020-11-08 13:40 GMT

ಉಡುಪಿ, ನ.8: ನಗರದ ಕರಾವಳಿ ಬೈಪಾಸ್‌ನ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿರುವ ಪ್ರತಿಷ್ಠಿತ ‘ಮಣಿಪಾಲ್ ಇನ್’ ಹೊಟೇಲ್‌ನಲ್ಲಿ ಹೊಸತನದೊಂದಿಗೆ ಪುನಾರಂಭಗೊಂಡ ‘ಉಡುಪಿ ರಸೋಯಿ’ ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ರವಿವಾರ ಶುಭಾರಂಭಗೊಂಡಿತು.

ರೆಸ್ಟೋರೆಂಟ್‌ನ್ನು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಣಿಪಾಲ ಇನ್ ಆಡಳಿತ ನಿರ್ದೇಶಕ ಇಬ್ರಾಹಿಂ ಗೋವಾ, ದೀಪಾ ಕಂಫರ್ಟ್ಸ್‌ನ ಕಾರ್ತಿಕ್ ಆರ್. ಅಮೀನ್, ಪ್ರಧಾನ ವ್ಯವಸ್ಥಾಪಕ ಕೆ.ಜನಾರ್ದನ ರಾವ್ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ರಸೋಯಿ ಪ್ರತ್ಯೇಕವಾದ ಅತ್ಯಾಧುನಿಕ ಕಿಚನ್ ಹೊಂದಿದ್ದು, ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್ ಸೇರಿದಂತೆ ವಿವಿಧ ಶೈಲಿಯ ಊಟ ತಿನಿಸುಗಳು ಇಲ್ಲಿ ದೊರೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News