ಮದುವೆ ನಡೆಯದ ಚಿಂತೆಯಲ್ಲಿ ಯುವತಿ ಆತ್ಮಹತ್ಯೆ
Update: 2020-11-08 15:57 GMT
ಗಂಗೊಳ್ಳಿ, ನ.8: ನಿಶ್ಚಯಗೊಂಡ ಮದುವೆ ನಿಂತು ಹೋದ ಚಿಂತೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಂಬಲ್ಲಿ ನಡೆದಿದೆ.
ಮೃತರನ್ನು ನಾಡ ಗ್ರಾಮದ ಗುಡ್ಡೆಯಂಗಡಿಯ ಮುರಳೀಧರ್ ನಾಯಕ್ ಎಂಬವರ ಮಗಳು ಸ್ಪೂರ್ತಿ ಎಂ.ನಾಯಕ್ (26) ಎಂದು ಗುರುತಿಸ ಲಾಗಿದೆ. ಇವರಿಗೆ ಆ.16ರಂದು ಉಡುಪಿಯ ಗೋವರ್ಧನ ನಾಯಕ್ ಎಂಬವರ ಜೊತೆ ಮದುವೆ ನಿಶ್ಚಿತಾರ್ಥ ಮಾಡಿದ್ದು, ಬಳಿಕ ಕಾರಣಾಂತರಗಳಿಂದ ಮದುವೆ ನಿಂತು ಹೋಗಿತ್ತು.
ಇದೇ ವಿಚಾರದಲ್ಲಿ ಸ್ಪೂರ್ತಿ ತುಂಬಾ ನೊಂದುಕೊಂಡು ನ.6ರಂದು ಸಂಜೆ ವೇಳೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಸ್ಪೂರ್ತಿ ನ.7ರಂದು ರಾತ್ರಿ 8.40ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.