ಅಂದರ್ ಬಾಹರ್: ಮೂವರ ಬಂಧನ

Update: 2020-11-08 16:02 GMT

ಗಂಗೊಳ್ಳಿ, ನ.8: ನಾಡ ಗ್ರಾಮದ ಪಡುಕೋಣೆಯ ಹಾಡಿಯಲ್ಲಿ ನ.7 ರಂದು ಬೆಳಗ್ಗೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ನಾಡ ರಾಮನಗರದ ಅಶೋಕ(39), ಪಡುಕೋಣೆಯ ಸುರೇಶ ಪೂಜಾರಿ (63), ಚಂದ್ರ(49) ಬಂಧಿತ ಆರೋಪಿಗಳು. ಇವರಿಂದ 570ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News