ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 200ನೇ ರಕ್ತದಾನ ಶಿಬಿರ: 613 ಯುನಿಟ್ ರಕ್ತ ಸಂಗ್ರಹ

Update: 2020-11-09 06:11 GMT

ವಿಟ್ಲ, ನ.8: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 10 ಆಸ್ಪತ್ರೆಗಳ ಸಹಯೋಗದಲ್ಲಿ 200ನೇ ರಕ್ತದಾನ ಶಿಬಿರವು ಮಿತ್ತೂರಿನ ಕೆ.ಜಿ.ಎನ್ ಕ್ಯಾಂಪಸ್ ನಲ್ಲಿ ರವಿವಾರ ನಡೆಯಿತು. 

ಉಡುಪಿ, ಚಿಕ್ಕಮಗಳೂರು ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಜಿಲ್ಲಾದ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ ರಕ್ತದಾನ ಶ್ರೇಷ್ಠದಾನವಾಗಿದೆ. ರಕ್ತಕ್ಕೆ ಬೇರೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ರಕ್ತ ನೀಡುವ ಮೂಲಕ ಜೀವವನ್ನು ಉಳಿಸಬಹುದು. ಮನುಷ್ಯರನ್ನು ಪ್ರೀತಿ ಮಾಡುವ ವ್ಯಕ್ತಿ ದೇವರನ್ನು ಕೂಡಾ ಪ್ರೀತಿಸುತ್ತಾನೆ. ರಕ್ತದಾನದ ಮೂಲಕ ಸೌಹಾರ್ದತೆ ನೆಲೆಯಾಗುತ್ತದೆ ಎಂದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಮಾತನಾಡಿ ಬದುಕನ್ನು ಬಲಿ ಕೊಡಬಾರದು. ಬದುಕನ್ನು ಉತ್ತಮ ಕಾರ್ಯಗಳಿಗೆ ಸದ್ವಿನಿಯೋಗಪಡಿಸಬೇಕು. ರಕ್ತದಾನ ಶಿಬಿರಗಳು ಸಮಾಜದ ಅಭ್ಯುದಯಕ್ಕೆ ಕಾರಣವಾಗಿದೆ. ಪ್ರತಿಯೊಬ್ಬರಿಂದ ಸಮಾಜ ಕಟ್ಟುವ ಕಾರ್ಯವಾಗಬೇಕು. ತ್ಯಾಗಪೂರ್ಣ ಸೇವೆ ಶಿಬಿರಗಳ ಮೂಲಕ ನಡೆಯಬೇಕು ಎಂದರು.

ಇದೇ ವೇಳೆ ದ.ಕ ಜಿಲ್ಲಾ ಸಮಿತಿ ವತಿಯಿಂದ ಕೆಸಿಎಫ್ ಒಮನ್ ಚಾರ್ಟಡ್ ವಿಮಾನ ಸ್ವಾಗತಿಸಿದ ಅಬ್ದುಲ್ ಹಮೀದ್ ಬಜ್ಪೆ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಅಶ್ರಪ್ ಕಿನಾರ ಅವರನ್ನು ಗೌರವಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಇಸ್ಮಾಯೀಲ್ ಮಾಸ್ಟರ್ ಮಂಗಲಪದವು, 40 ತಿಂಗಳಲ್ಲಿ 200 ರಕ್ತದಾನ ಶಿಬಿರವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರೀಂ ಕದ್ಕಾರ್ ಅವರನ್ನು ಸನ್ಮಾನಿಸಲಾಯಿತು. ಯುವ ಬರಹಗಾರರ ಸಿ.ಐ. ಇಸ್ಹಾಕ್ ಪಜೀರ್ ಅವರ 'ಅಲ್ ಮಸಾಜಿದ್' ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಶಾಸಕ ಯು ಟಿ ಖಾದರ್, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ಜಿಂ.ಎಂ.ಕಾಮಿಲ್ ಸಖಾಫಿ, ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫ್ಯಾನ್ ಸಖಾಫಿ, ವಿಟ್ಲ ಠಾಣಾಧಿಕಾರಿ ವಿನೋದ್ ಕುಮಾರ್ ರೆಡ್ಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಮೊದಲಾದವರು ಮಾತನಾಡಿದರು.

ಚಂದ್ರ ಪ್ರಕಾಶ್‌ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಖುಬೈಬ್ ತಂಙಲ್ ಉಳ್ಳಾಲ, ಶರೀಫ್ ಸಖಾಫಿ ಮಾಣಿ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಮಹಮ್ಮದ್ ಅಲಿ ಸಖಾಫಿ ಸುರಿಬೈಲು, ಸುಧಾಕರ ರೈ ಸುಳ್ಯ, ಸಲೀಂ ಹಾಜಿ ಬೈರಿಕಟ್ಟೆ, ನವಾಝ್ ಸಖಾಫಿ ಅಡ್ಯಾರ್ಪದವು,ಫೈಝಲ್ ಝುಹರಿ ಕಲ್ಲುಗುಂಡಿ, ಜಬ್ಬಾರ್ ಬೋಳಿಯಾರ್, ಹಾಶಿರ್ ಪೆರಿಮಾರ್, ಕೆಸಿಎಪ್ ನ  ಖಲಂದರ್ ಕಬಕ, ಅಶ್ರಪ್ ಕಟ್ಟದ ಪಡ್ಪು, ಖಲಂದರ್ ಬಾಳೆಹೊನ್ನೂರು, ಮೊಹಮ್ಮದ್ ಕುಂಬ್ರ, ನಾಸೀರ್ ಬೇಂಗಿಲ, ಮೊದಲಾದವರು ಭಾಗವಹಿಸಿದ್ದರು.

ರಶೀದ್ ಹಾಜಿ ವಗ್ಗ ಸ್ವಾಗತಿಸಿ, ಶರೀಫ್ ನಂದಾವರ ವಂದಿಸಿದರು. ತೌಸೀಫ್ ಸಅದಿ ಪ್ರಸ್ತಾವನೆಗೈದರು.  ಮಹಮ್ಮದ್ ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News