ಬೆಳುವಾಯಿ: ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Update: 2020-11-08 17:04 GMT
ಮೂಡುಬಿದಿರೆ, ನ.8: ಬೆಳುವಾಯಿ ಸಮೀಪದ ಮಠದ ಕೆರೆಯಲ್ಲಿ ಈಜಲು ಇಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ.
ಮೃತರನ್ನು ಕಾಟಿಪಳ್ಳ ನಿವಾಸಿ ನಿಹಾಲ್ ಶಾ (20) ಎಂದು ಗುರುತಿಸಲಾಗಿದೆ.
ರವಿವಾರ ಸಂಜೆ ನಿಹಾಲ್, ಏಳು ಮಂದಿ ಸ್ನೇಹಿತರ ಜತೆಗೂಡಿ ಮಠದ ಕೆರೆಗೆ ಈಜಲು ಬಂದಿದ್ದರೆನ್ನಲಾಗಿದೆ. ಈ ವೇಳೆ ನಿಹಾಲ್ ಆಕಸ್ಮಿಕವಾಗಿ ನೀರಲ್ಲಿ ಮುಳುಗಿದ್ದು, ಬಳಿಕ ಬೆಳುವಾಯಿಯ ಈಜುಗಾರ ಆಂಥೋನಿ ಎಂಬವರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.