ರಿಕ್ಷಾ ಅಪಘಾತ: ಗಾಯಾಳು ಮೃತ್ಯು

Update: 2020-11-09 15:48 GMT

ಶಂಕರನಾರಾಯಣ, ನ.9: ಬೆಳ್ವೆ ಮಸೀದಿ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ನ.8ರಂದು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ಅ.28ರಂದು ಅಲ್ಬಾಡಿ ಕಡೆಯಿಂದ ಬೆಳ್ವೆ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾ ಹತೋಟಿ ತಪ್ಪಿರಸ್ತೆ ಬದಿ ಪಲ್ಟಿಯಾಗಿತ್ತು. ಇದರ ಪರಿಣಾಮ ಗಂಭೀರ ಗಾಯ ಗೊಂಡ ನಾರಾಯಣ ನಾಯ್ಕ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News