ಜಮ್ಮು-ಕಾಶ್ಮೀರ: ಸೇನಾಧಿಕಾರಿಯ ಮೃತದೇಹ ಪತ್ತೆ

Update: 2020-11-09 16:05 GMT

ಶ್ರೀನಗರ, ನ.9: ಭಾರತದ ಸೇನೆಯ ಅಧಿಕಾರಿಯ ಮೃತದೇಹ ಜಮ್ಮು-ಕಾಶ್ಮೀರದ ರಜೌರಿಯಲ್ಲಿರುವ ಸೇನಾಶಿಬಿರದಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 38 ರಾಷ್ಟ್ರೀಯ ರೈಫಲ್ಸ್ ವಿಭಾಗದ ಕಮಾಂಡರ್ ಮೇಜರ್ ವಿನೀತ್ ಗುಲಿಯಾರ್ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು ತಲೆಯ ಭಾಗದಲ್ಲಿ ಗುಂಡೇಟಿನ ಗಾಯವಿತ್ತು.

ಪ್ರಕರಣ ದಾಖಲಿಸಿದ್ದು ತನಿಖಾ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಜೌರಿ ಜಿಲ್ಲಾ ಹಿರಿಯ ಪೊಲೀಸ್ ಅಧೀಕ್ಷಕ ಚಂದನ್ ಕೊಹ್ಲಿ ಹೇಳಿದ್ದಾರೆ. ಈ ಮಧ್ಯೆ, ರವಿವಾರ ಜಮ್ಮು ಕಾಶ್ಮೀರದ ಮಚಿಲ್ ಕ್ಷೇತ್ರದ ಗಡಿರೇಖೆಯಲ್ಲಿ ಉಗ್ರರು ಒಳನುಸುಳಲು ನಡೆಸಿದ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು ಕಾರ್ಯಾಚರಣೆಯಲ್ಲಿ 3 ಭಯೋತ್ಪಾದಕರು ಹಾಗೂ 4 ಯೋಧರು ಮೃತರಾಗಿರು ುದಾಗಿ ಸೇನಾ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News