ಉಡುಪಿ: ಕೊರೋನ ಸೋಂಕು ಮತ್ತೆ ಹರಡುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡ ವೃದ್ಧೆ !

Update: 2020-11-14 14:21 GMT

ಕೋಟ, ನ.14: ಕೊರೋನ ಸೋಂಕಿತರಾಗಿ ಗುಣಮುಖರಾಗಿದ್ದ ವೃದ್ಧೆಯೊಬ್ಬರು ಮತ್ತೆ ಕೋವಿಡ್-19 ವೈರಾಣು ಹರಡುತ್ತಿರುವ ಬಗ್ಗೆ ಭಯ ಭೀತರಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.14ರಂದು ನಸುಕಿನ ವೇಳೆ ನಡೆದಿದೆ.

ಮೃತರನ್ನು ಮೂಡಹಡು ಗ್ರಾಮದ ಎಡಬೆಟ್ಟುವಿನ ಸೂರ್ಯ ನಾರಾಯಣ ಉಳ್ಳೂರು ಎಂಬವರ ಪತ್ನಿ ವಿಮಲ (78) ಎಂದು ಗುರುತಿಸಲಾಗಿದೆ.

ಇವರು ಈ ಮೊದಲು ಕೋವಿಡ್ -19 ಸೋಂಕಿಗೆ ಒಳಗಾಗಿ ನಂತರ ಗುಣಮುಖ ರಾಗಿದ್ದು, ನಂತರ ಮಾನಸಿಕ ಖಾಯಿಲೆಗೆ ತುತ್ತಾಗಿದ್ದರು. ಈ ಬಗ್ಗೆ ನ.13ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸಂಜೆ ವಾಪಾಸ್ಸು ಮನೆಗೆ ಬಂದು ರಾತ್ರಿ ಮಲಗಿದ್ದ ಇವರು, ಕೋವಿಡ್- 19 ವೈರಾಣು ಖಾಯಿಲೆ ಮತ್ತೆ ಹರಡುತ್ತಿರುವ ಬಗ್ಗೆ ಭಯಭೀತರಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಹತ್ತಿರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News