ದೀಪಾವಳಿ ಬಲಿಪಾಡ್ಯ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ಗೋಪೂಜೆ

Update: 2020-11-15 13:31 GMT

ಉಡುಪಿ, ನ.15: ಉಡುಪಿ ಶ್ರೀಕೃಷ್ಣ ಮಠದ ಕನಕನ ಕಿಂಡಿಯ ಎದುರುಗಡೆ ದೀಪಾವಳಿಯ ಬಲಿಪಾಡ್ಯ ದಿನವಾದ ರವಿವಾರ ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಗೋಗ್ರಾಸ ನೀಡಿ, ಗೋ ಪೂಜೆ ನಡೆಸಿದರು.

ಗೋಪೂಜೆಯನ್ನು ಮಠದ ಪುರೋಹಿತ ಮುದರಂಗಡಿ ಲಕ್ಷ್ಮೀಶ ಆಚಾರ್ಯ ನೆರವೇರಿಸಿದರು. ಬಳಿಕ ರಥಬೀದಿಯಲ್ಲಿ ಬಿರುದು ಬಾವಲಿ ವಾದ್ಯ ಮೇಳ ಗಳೊಂದಿಗೆ ಗೋವುಗಳ ಮೆರವಣಿಗೆ ನಡೆಯಿತು.

ಶ್ರೀಕೃಷ್ಣಮಠದಲ್ಲಿ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಶ್ರೀಕೃಷ್ಣ ದೇವರಿಗೆ ಗೋಪಾಲ ಕೃಷ್ಣ ಅಲಂಕಾರ ಮಾಡಿದರು. ಪರ್ಯಾಯ ಮಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಮಹಾಪೂಜೆ ಯನ್ನು ನೆರವೇರಿಸಿದರು.

ಅದೇ ರೀತಿ ಉಡುಪಿ ಅದಮಾರು ಮಠದ ಗೋಶಾಲೆಯ ಗೋವುಗಳಿಗೆ ಅದಮಾರು ಹಿರಿಯ ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಗೋಗ್ರಾಸ ನೀಡಿ ಗೋ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ ರಾಘವೇಂದ್ರ ಭಟ್, ವಿದ್ವಾಂಸ ವಂಶಿಕೃಷ್ಣ ಆಚಾರ್ಯ, ಮಠದ ಜನಾರ್ದನ ಕೊಟ್ಟಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News