ನಿಧಿಗಾಗಿ ಬಲಿ ನೀಡಲು ಸಿದ್ಧತೆ ಆರೋಪ: ಇಬ್ಬರು ಬಾಲಕರ ರಕ್ಷಣೆ

Update: 2020-11-15 14:39 GMT

ಗುವಾಹಟಿ, ನ. 15: ವ್ಯಕ್ತಿಯೊಬ್ಬರು ಬಾಲಕರ ಬಲಿ ನೀಡಲು ನಿರ್ಧರಿಸಿದ್ದಾರೆ ಎಂಬ ಸ್ಥಳೀಯ ನಿವಾಸಿಗಳ ಆರೋಪದ ಹಿನ್ನೆಲೆಯಲ್ಲಿ ಅಸ್ಸಾಂನ ಶಿವಸಾಗರ್ ಜಿಲ್ಲೆಯ ಪೊಲೀಸರು ಇಬ್ಬರು ಅಪ್ರಾಪ್ತ ಬಾಲಕರನ್ನು ರಕ್ಷಿಸಿದ್ದಾರೆ.

ನಿಗೂಢ ನಿಧಿಯ ಆಸೆಯಿಂದ ಮಾಟಗಾರನೋರ್ವನ ಸಲಹೆಯಂತೆ ತಂದೆಯೋರ್ವ ತನ್ನ ಪುತ್ರ ಹಾಗೂ ಸಹೋದರನ ಪುತ್ರನನ್ನು ಬಲಿಕೊಡಲು ಬಯಸಿದ್ದ ಎಂದು ಪ್ರತಿಪಾದಿಸಿ ಸ್ಥಳೀಯ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ನರ ಬಲಿಯ ಪ್ರಯತ್ನದ ಬಗ್ಗೆ ನಮಗೆ ಇದುವರೆಗೆ ಯಾವುದೇ ಸಾಕ್ಷಿ ದೊರೆತಿಲ್ಲ. ಆದರೆ, ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲಿ ಕೆಲವು ನರಬಲಿ ನಡೆದ ವರದಿ ಹಿನ್ನೆಲೆಯಲ್ಲಿ ದೇಮ್‌ಓವ್‌ಮುಖ್‌ಗೆ ಪೊಲೀಸರ ತಂಡವೊಂದನ್ನು ಕಳುಹಿಸಿ ಕೊಡಲಾಗಿದೆ. ಆ ಇಬ್ಬರು ಮಕ್ಕಳನ್ನು ಶನಿವಾರ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಶಿವಸಾಗರ್ ಪೊಲೀಸ್ ಅಧೀಕ್ಷಕ ಅಮಿತಾವ್ ಸಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News