ಹೇರೂರು ಸೇತುವೆಯಲ್ಲಿ ಬೈಕ್ ಅಪಘಾತ: ಸವಾರ ಮೃತ್ಯು

Update: 2020-11-15 15:23 GMT

ಬ್ರಹ್ಮಾವರ, ನ.15: ಬೈಕೊಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಹೇರೂರು ಸೇತುವೆಯಲ್ಲಿ ಅಪಘಾತಕ್ಕೀಡಾದ ಪರಿಣಾಮ ಸವಾರ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಮರವಂತೆ ನಿವಾಸಿ ವಿಠಲ ಹಾಂಡ ಎಂಬವರ ಮಗ ಸುಧಾಕರ(38) ಎಂದು ಗುರುತಿಸಲಾಗಿದೆ. ಇವರು ಮನೆಯಿಂದ ಧರ್ಮಸ್ಥಳಕ್ಕೆ ತನ್ನ ಹೀರೋ ಹೋಂಡಾ ಬೈಕಿನಲ್ಲಿ ಹೊರಟಿದ್ದರು. ಕುಂದಾಪುರ ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದಾಗ ಅತಿವೇಗ ಅಜಾಗರೂತೆಯಿಂದ ಚಲಿಸಿದ ಪರಿಣಾಮ ಬೈಕ್ ಸೇತುವೆಯಲ್ಲಿ ಸ್ಕೀಡ್ ಆಗಿ ಬಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಸ್ಥಳದಲ್ಲಿಯೇ ಮೃತಪಟ್ಟಿ ದ್ದಾರೆ. ಮೃತರು ಪತ್ನಿ ಹಾಗೂ ಎರಡು ವರ್ಷದ ಮಗುವನ್ನು ಅಗಲಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News