ಹಾಡಹಗಲೇ ರಸ್ತೆಯಲ್ಲಿ ಯುವಕನ ತಲೆ ಕತ್ತರಿಸಿದ ದುಷ್ಕರ್ಮಿಗಳು

Update: 2020-11-16 11:08 GMT

ಮಧುರೈ: ಇಲ್ಲಿನ ಸಂತ ಮೇರಿ ಚರ್ಚ್ ಜಂಕ್ಷನ್ ಸಮೀಪ ರವಿವಾರ ಯುವಕನೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ತಲೆ ಕಡಿದು ಹತ್ಯೆಗೈದಿದೆ. ಯುವಕನ ಜತೆಗಿದ್ದ ಆತನ ಸ್ನೇಹಿತನಿಗೂ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆಗೀಡಾದ ಯುವಕನನ್ನು ಉತ್ತಂಗುಡಿ ಸಮೀಪದ ಸೋಲೈಪ್ಪನ್ ನಿವಾಸಿ ಮುರುಗಾನಂದಂ (22) ಎಂದು ಗುರುತಿಸಲಾಗಿದೆ.

ಮುರುಗಾನಂದಂ ತನ್ನ ಸ್ನೇಹಿತ ಮುನಿಸ್ವಾಮಿ ಜತೆ ಚರ್ಚ್ ಸಮೀಪ ಹಾದು ಹೋಗುತ್ತಿದ್ದಾಗ ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಇಬ್ಬರನ್ನೂ ಅಡ್ಡಗಟ್ಟಿದ್ದರು. ಅವರಿಬ್ಬರೂ ತಪ್ಪಿಸಿಕೊಳ್ಳಲೆತ್ನಿಸಿ ಓಡಿದರೂ ಅವರನ್ನು ಬೆಂಬತ್ತಿದ ದುಷ್ಕರ್ಮಿಗಳು ಮುರುಗಾನಂದಂ ತಲೆಯನ್ನು ಕಡಿದಿದ್ದಾರೆ.

ಹಾಡಹಗಲೇ ಜನದಟ್ಟಣೆಯಿರುವ ಸ್ಥಳದಲ್ಲಿ ನಡೆದ ಈ ಕೊಲೆ ಸ್ಥಳೀಯರನ್ನು ಭಯಭೀತಗೊಳಿಸಿದೆ. ದುಷ್ಕರ್ಮಿಗಳು ಬಳಸಿದ್ದ ಕಾರು ಹಾಗೂ ಹರಿತವಾದ ಆಯುಧಗಳು ಬೈಪಾಸ್ ರಸ್ತೆ ಸಮೀಪ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News