ವೆನ್ಝ್ ಅಬ್ದುಲ್ಲಾ ಕೊಲೆ ಯತ್ನಕ್ಕೆ ಎಸ್‌ವೈಎಸ್ ಖಂಡನೆ

Update: 2020-11-16 11:49 GMT

ಮಂಗಳೂರು, ನ.16: ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಕಾರ್ಯದರ್ಶಿ ವೆನ್ಝ್ ಅಬ್ದುಲ್ಲಾ ಕೈಕಂಬ ಅವರ ಮೇಲೆ ರವಿವಾರ ರಾತ್ರಿ ನಡೆದ ಕೊಲೆ ಯತ್ನವನ್ನು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದ್ದು ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದೆ.

ಸ್ಥಳೀಯವಾಗಿ ಧಾರ್ಮಿಕ- ಸಾಮಾಜಿಕ ಸಂಘ- ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿರುವ ಅಬ್ದುಲ್ಲಾ ಸರ್ವ ಮತಬಾಂಧವರಿಗೂ ಆತ್ಮಿಯರಾಗಿದ್ದು ಜನಪ್ರಿಯ ಸಮಾಜ ಸೇವಕರಾಗಿದ್ದಾರೆ. ರಾತ್ರಿ ನಡೆದ ಈ ಹತ್ಯೆ ಯತ್ನದ ಹಿಂದಿರುವ ಎಲ್ಲ ದುಷ್ಟಶಕ್ತಿಗಳನ್ನು ಬೇಧಿಸಿ ಅಬ್ದುಲ್ಲಾ ಅವರಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಎಸ್‌ವೈಎಸ್ ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News