ಉಳ್ಳಾಲ: ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯಿಂದ ಪೌರಾಯುಕ್ತಗೆ ಸನ್ಮಾನ

Update: 2020-11-18 15:39 GMT

ಉಳ್ಳಾಲ : ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ನಗರ ಸಭಾ ಪೌರಾಯುಕ್ತ ರಾಯಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮವು ಉಳ್ಳಾಲ ನಗರ ಸಭಾ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಜಿಲ್ಲಾಧ್ಯಕ್ಷ ಶಾಫಿ ಬಬ್ಬುಕಟ್ಟೆ, ಯಾವುದೇ ರಾಜ್ಯಕೀಯವಲ್ಲದೆ ಹಲವು ವರ್ಷಗಳಿಂದ ನೊಂದವರ ಪಾಲಿಗೆ ಬೆಂಗಾವಲಾಗಿ ಪೌರಾಯುಕ್ತ ರಾಯಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಉಳ್ಳಾಲ ನಗರವನ್ನು ಸ್ವಚ್ಛ ನಗರವನ್ನಾಗಿಸಲು ಕೊರೋನ ಸಂದರ್ಭದಲ್ಲಿ ಜನೋಪಯೋಗಿ ಕೆಲಸವನ್ನು ಮಾಡಿ ಪ್ರಚಾರ ಪಡೆಯದೇ ಸಾಧನೆ ಮಾಡಿದ್ದಾರೆ ಅವರ ಸಾಧನೆಗಳನ್ನು ಗುರುತಿಸಬೇಕಾದುದು ನಮ್ಮ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ನಗರ ಸಭಾ ಅಧ್ಯಕ್ಷ  ಚಿತ್ರಕಲಾ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಝೀರ್ ಬಾರ್ಲಿ, ಸಲಹೆಗಾರ ಆರ್ ಕೆ ಮದನಿ ಅಮ್ಮೆಂಬಳ, ಕಾರ್ಯದರ್ಶಿ ಜಿಲಾನಿ ಉಳ್ಳಾಲ, ಜಿಲ್ಲಾ ಸದಸ್ಯ ಸಲೀಂ, ಅಶ್ರಫ್ ಹಾಗೂ ಅಬ್ದುಲ್ ಅಝೀಝ್ ಹಖ್ ಶರೀಫ್, ನವಾಝ್ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಆರ್ ಕೆ ಮದನಿ ಅಮ್ಮೆಂಬಳ ಸ್ವಾಗತಿಸಿ, ಕಿಂಗ್ ಜೀಲಾನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News