ಎಸ್‌ವೈ‌ಎಸ್, ಎಸ್ಸೆಸ್ಸೆಫ್ ಉದ್ದಬೆಟ್ಟು ವತಿಯಿಂದ ತಾಜುಲ್ ಉಲಮಾ ವಾರ್ಷಿಕ ಸ್ಮರಣೆ ಕಾರ್ಯಕ್ರಮ

Update: 2020-11-20 13:21 GMT

ಬಂಟ್ವಾಳ: ಎಸ್‌ವೈ‌ಎಸ್, ಎಸ್ಸೆಸ್ಸೆಫ್ ಉದ್ದಬೆಟ್ಟು ಇದರ ವತಿಯಿಂದ ತಾಜುಲ್ ಉಲಮಾ ವಾರ್ಷಿಕ ಸ್ಮರಣೆ ಕಾರ್ಯಕ್ರಮ ಮಂಗಳವಾರ ಉದ್ದಬೆಟ್ಟು ಕ್ರಾಸ್ ನಲ್ಲಿ ನಡೆಯಿತು. 

ಸಯ್ಯಿದ್ ಮಿಅ್‌ರಾಜ್ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಮಜ್ಲಿಸ್ ಗಾಣೆಮಾರ್ ಮುಖ್ಯಸ್ಥ ಅಬ್ದುಲ್ ಮಜೀದ್ ಫಾಳಿಲಿ ಅಲ್-ಕಾಮಿಲ್ ಅನುಸ್ಮರಣಾ ಭಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಉದ್ದಬೆಟ್ಟು ಮಸ್ಜಿದ್ ಅಧ್ಯಕ್ಷ ನಿಝಾಮುದ್ದೀನ್,  ದೆಮ್ಮಲೆ ಮಸ್ಜಿದ್ ಅಧ್ಯಕ್ಷ ಶರೀಫ್ ಕಲಾಯಿ, ಪಳ್ಳಿಬೆಟ್ಟು ಮಸ್ಜಿದ್ ಅಧ್ಯಕ್ಷ ಶರೀಫ್ ಹಾಗೂ ಎಸ್ಸೆಸ್ಸೆಫ್ ಉದ್ದಬೆಟ್ಟು ಅಧ್ಯಕ್ಷ ಮುಹಮ್ಮದ್ ಎಂ‌.ಎರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News