ಶಿರ್ವ: ಯುವಕ ಆತ್ಮಹತ್ಯೆಗೆ
Update: 2020-11-20 17:06 GMT
ಶಿರ್ವ, ನ.20: ವಿಪರೀತ ಕುಡಿತದ ಚಟ ಹೊಂದಿದ್ದ ಯುವಕನೋರ್ವ ಶಿರ್ವದ ಗೂಡಂಗಡಿಯ ಎದುರುಗಡೆ ನ.19ರಂದು ರಾತ್ರಿ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಮಟ್ಟಾರು ಮೇಲ್ಖಾನಬೆಟ್ಟುವಿನ ಬಡ್ಡು ಪೂಜಾರಿ ಎಂಬವರ ಮಗ ಅಕ್ಷತ್ ಪೂಜಾರಿ(35) ಎಂದು ಗುರುತಿಸಲಾಗಿದೆ. ಶೀನ ಪೂಜಾರಿ ಎಂಬವರ ಸೈಕಲ್ ಗೂಡಂಗಡಿಯ ಎದುರುಗಡೆ ಸಿಮೆಂಟ್ ಶೀಟ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.