ಕಳ್ಳಭಟ್ಟಿ ಸೇವನೆ: 6 ಮಂದಿ ಮೃತ್ಯು, 15 ಜನರು ಆಸ್ಪತ್ರೆಗೆ ದಾಖಲು

Update: 2020-11-21 06:47 GMT

ಪ್ರಯಾಗ್‌ರಾಜ್: ಕಳ್ಳಭಟ್ಟಿ ಸೇವನೆ ಮಾಡಿದ ಪರಿಣಾಮ ಆರು ಜನ ಸಾವನ್ನಪ್ಪಿರುವ, ಇತರ 15 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಅಮಿಲಿಯಾ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.

ಕಳೆದ ರಾತ್ರಿ ದೇಶೀಯ ಮದ್ಯ ಸೇವಿಸಿದ ನಂತರ ಈ ದುರಂತ ಸಂಭವಿಸಿದೆ. ಮದ್ಯ ಸೇವಿಸಿದ ತಕ್ಷಣವೇ ಹಲವರು ಅಸ್ವಸ್ಥರಾಗಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಮದ್ಯದ ಅಂಗಡಿ ನಡೆಸುತ್ತಿದ್ದ ಗಂಡ-ಹೆಂಡತಿಯನ್ನು ಆರಂಭಿಕ ಸಾಕ್ಷಿಯ ಆಧಾರದಲ್ಲಿ ಬಂಧಿಸಲಾಗಿದೆ.

ಶವಪರೀಕ್ಷೆ ಹಾಗೂ ಮದ್ಯದ ಮಾದರಿಯ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ಖಚಿತವಾಗಲಿದೆ ಎಂದು ಪ್ರಯಾಗ್‌ರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಭಾನು ಚಂದ್ರ ಗೋಸ್ವಾಮಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News