ಹೊಸಬೆಳಕು ಆಶ್ರಮಕ್ಕೆ ನಾಗರಿಕ ಸಮಿತಿಯಿಂದ ನೆರವು
Update: 2020-11-22 11:58 GMT
ಮಣಿಪಾಲ, ನ.22: ಮಣಿಪಾಲ ಸರಳಬೆಟ್ಟುವಿನಲ್ಲಿರುವ ಹೊಸಬೆಳಕು ಆಶ್ರಮಕ್ಕೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಶನಿವಾರ ಭೇಟಿ ನೀಡಿ ನೆರವು ಒದಗಿಸಿದರು.
ಸಮಿತಿಯಿಂದ ಆಶ್ರಮದ ಬಳಕೆಗೆ ಗಾಲಿ ಕುರ್ಚಿ, ಜಲ ಹಾಸಿಗೆಯನ್ನು ನೀಡಲಾಯಿತು. ಮೈತ್ರಿ ಮುಹಮದ್ ಆಶ್ರಮ ವಾಸಿಗಳಿಗೆ ಊಟದ ವ್ಯವಸ್ಥೆ ಮಾಡಿದರು. ರೋಶನ್ ಲೂಯಿಸ್ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯ ಸತೀಶ್ ನಾಯಕ್ ಕಲ್ಮಾಡಿ, ರೊನಂ ಲೂಯಿಸ್, ಆಶ್ರಮ ಸಂಚಾಲಕ ತನುಲಾ ತರುಣ್, ವಿನಯಚಂದ್ರ ಆಚಾರ್ಯ ಸಾಸ್ತಾನ ಉಪಸ್ಥಿತರಿದ್ದರು.